HEALTH TIPS

ವಿಜಯ್ ಬಾಬು ಜಾರ್ಜಿಯಾ ಪ್ರವೇಶಿಸಿದ್ದಾರೆಂದು ವರದಿ: ರೆಡ್ ಕಾರ್ನರ್ ನೋಟಿಸ್ ಕ್ರಮಕ್ಕೆ ತನಿಖಾ ತಂಡ

         

           ತಿರುವನಂತಪುರ: ಅತ್ಯಾಚಾರ ಪ್ರಕರಣದಲ್ಲಿ ಪೋಲೀಸರಿಗೆ ಬೇಕಾಗಿರುವ ವಿಜಯ್ ಬಾಬು ಜಾರ್ಜಿಯಾ ಪ್ರವೇಶಿಸಿರುವ ಸುಳಿವು ಸಿಕ್ಕಿದೆ. ನಟ ಮತ್ತು ನಿರ್ಮಾಪಕ ವಿಜಯ್ ಬಾಬು ದುಬೈನಿಂದ ಜಾರ್ಜಿಯಾಕ್ಕೆ ದಾಟಿದ್ದಾರೆ ಎಂದು ವರದಿಯಾಗಿದೆ.

                 ಮೇ 24 ರಂದು ಕೇರಳ ತಲುಪಲಿದ್ದಾರೆ ಎಂದು ವಿಜಯ್ ಬಾಬು ತಿಳಿಸಿದ್ದರು. ತಾವು ವ್ಯಾಪಾರ ಪ್ರವಾಸದಲ್ಲಿದ್ದು 24ರಂದು ಆಗಮಿಸುವುದಾಗಿ ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗೆ ನಟ ತಿಳಿಸಿದ್ದರು.  ಬಳಿಕ ಕೊಚ್ಚಿ ನಗರ ಪೋಲೀಸ್ ಆಯುಕ್ತರು ತನಿಖೆ ನಡೆಸಿದ್ದು, ವಿಜಯ್ ಬಾಬು ಜಾರ್ಜಿಯಾ ಪ್ರವೇಶಿಸಿರುವುದು ತಿಳಿದು ಬಂದಿದೆ.

                    ಪ್ರಸ್ತುತ ಹಸ್ತಾಂತರ ಒಪ್ಪಂದವನ್ನು ಜಾರ್ಜಿಯಾದೊಂದಿಗೆ ಮಾಡಲಾಗದಿದ್ದರೆ ನಟನ ಬಿಡುಗಡೆಯು ಬಿಕ್ಕಟ್ಟಿಗೆ ಸಿಲುಕುವ ಸೂಚನೆಗಳಿವೆ. ವಿಜಯ್ ಬಾಬು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಲು ನ್ಯಾಯಾಲಯ ತಡವಾಗಲಿದೆ ಎಂಬ ಮಾಹಿತಿಯ ಆಧಾರದ ಮೇಲೆ ನಟ ಕೇರಳಕ್ಕೆ ಹಿಂತಿರುಗಲಿಲ್ಲ ಎಂದು ತಿಳಿದುಬಂದಿದೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ನಟ ಭಾರತದಿಂದ ದೂರ ಉಳಿಯುತ್ತಾರೆ ಎಂದು ಪೋಲೀಸರು ನಂಬಿದ್ದಾರೆ. ಪೋಲೀಸರ ಪ್ರಕಾರ, ವಿಜಯ್ ಬಾಬು ಅವರನ್ನು ಬಂಧಿಸಿ ರಿಮಾಂಡ್‍ಗೆ ಒಳಪಡಿಸುವ ಭಯದಿಂದ ದೇಶಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದಾರೆ.

            ತನಿಖಾ ತಂಡವು ಪ್ರಸ್ತುತ ಯುಎಇ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ. ವಿಜಯಬಾಬು ದೇಶ ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ತನಿಖಾ ತಂಡ ನಿರ್ಧರಿಸಿದೆ. ಏತನ್ಮಧ್ಯೆ, ನಟನ ಪಾಸ್ ಪೊರ್ಟ್ ನ್ನು ಕೇಂದ್ರ ವಿದೇಶಾಂಗ ಸಚಿವಾಲಯ ನಿನ್ನೆ ರದ್ದುಗೊಳಿಸಿದೆ. ಕೊಚ್ಚಿ ನಗರ ಪೊಲೀಸರು ಸಲ್ಲಿಸಿದ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries