HEALTH TIPS

ಆಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ನಿಂದ ರ್ಯಾಲಿಗೆ ಪರ್ಯಾಯ: ಬಜರಂಗದಳದಿಂದ ಶೌರ್ಯ ರ್ಯಾಲಿ ಆಯೋಜಿನೆ

Top Post Ad

Click to join Samarasasudhi Official Whatsapp Group

Qries

                        ಅಲಪ್ಪುಳ: ಪಾಪ್ಯುಲರ್ ಫ್ರಂಟ್  ಸಂಘಟಿಸುವ ಮೆರವಣಿಗೆಯ ಬದಲು ಬಜರಂಗದಳ ಆಲಪ್ಪುಳದಲ್ಲಿ ಶೌರ್ಯ ರ್ಯಾಲಿಯನ್ನು ಆಯೋಜಿಸಲಿದೆ. ಇದೇ 21ರಂದು ಪಾಪ್ಯುಲರ್ ಫ್ರಂಟ್ ರ್ಯಾಲಿ  ನಡೆಯುವ ಸಮಯದಲ್ಲೇ ಬಜರಂಗದಳದ ರ್ಯಾಲಿ ನಡೆಸಲಿದೆ.  ಶೌರ್ಯ ರ್ಯಾಲಿಯಲ್ಲಿ ಕೇರಳದ ಎಲ್ಲಾ ಬಜರಂಗದಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ರ್ಯಾಲಿ ಎಡ ಸರಕಾರಕ್ಕೆ ಎಚ್ಚರಿಕೆ ಎಂದು ಬಜರಂಗದಳ ಕಾರ್ಯಕರ್ತರು ಹೇಳಿದ್ದಾರೆ.

                   ಆರೆಸ್ಸೆಸ್ ಸ್ವಯಂಸೇವಕರಾದ ನಂದು ಮತ್ತು ರಂಜೀತ್ ಶ್ರೀನಿವಾಸ್ ಅವರ ಹತ್ಯೆಯ ನಂತರ ಪಾಪ್ಯುಲರ್ ಫ್ರಂಟ್ ಅಲಪ್ಪುಳದಲ್ಲಿ ರ್ಯಾಲಿ ನಡೆಸಲು ನಿರ್ಧರಿಸಿತ್ತು. ಇದೇ ತಿಂಗಳ 21ರಂದು ಪಾಪ್ಯುಲರ್ ಫ್ರಂಟ್ ರ್ಯಾಲಿ ನಡೆಸುವ ಅದೇ ಸಂದರ್ಭ  ಶೌರ್ಯ  ರ್ಯಾಲಿ ನಡೆಸಲು ಬಜರಂಗದಳ ನಿರ್ಧರಿಸಿದೆ. ಶೌರ್ಯ ರ್ಯಾಲಿಯು ಮುಲ್ಲೈಕ್ಕಲ್‍ನಿಂದ ಆರಂಭಗೊಂಡು ಆಶ್ರಮ ಮಾರ್ಗವಾಗಿ ಮನ್ನಂಚೇರಿಯಲ್ಲಿ ಕೊನೆಗೊಳ್ಳಲಿದೆ.

                   ನಂದು ಮತ್ತು ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣಗಳಲ್ಲಿ ಸಾಕ್ಷಿಗಳು ಮತ್ತು ಸಂಬಂಧಿಕರನ್ನು ಬೆದರಿಸಲು ಪಾಪ್ಯುಲರ್ ಫ್ರಂಟ್ ರ್ಯಾಲಿ ನಡೆಸುತ್ತಿದೆ ಎಂಬ ಆರೋಪ ಬಲವಾಗಿದೆ. ಪೋಪ್ಯುಲರ್ ಫ್ರಂಟ್ ನಡೆಸಲಿರುವ ರ್ಯಾಲಿಗೆ ಪೋಲೀಸರು ಮೊದಲು ನಿರಾಕರಿಸಿದರು, ನಂತರ ಸರ್ಕಾರದ ಹಸ್ತಕ್ಷೇಪದ ಬಳಿಕ ಪೋಲೀಸರಿಗೆ ಅನುಮತಿ ನೀಡಲಾಯಿತು.

                  ನಗರದಲ್ಲಿ ಜನಾಗ್ರಹ ಸಮಾವೇಶ ಮತ್ತು ರ್ಯಾಲಿಗೆ ಪೋಲೀಸರು ವಿರೋಧ ವ್ಯಕ್ತಪಡಿಸಿದ್ದು ವಿವಾದಕ್ಕೀಡಾಗಿತ್ತು. 21ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಘರ್ಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ಪೋಲೀಸರು ಹಾಗೂ ಜಿಲ್ಲಾಡಳಿತ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries