HEALTH TIPS

ಪ್ರತಿಭಟನೆಗೆ ಬೆದರಿದರೇ ಪಿಣರಾಯಿ!?: ದೆಹಲಿ ಪ್ರವಾಸ ರದ್ದು

                   ತಿರುವನಂತಪುರ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಬಹಿರಂಗಪಡಿಸಿರುವ ಗೌಪ್ಯಗಳಿಂದ ತಿಳಿದುಬಂದಿರುವ ವಿಚಾರಗಳಿಗೆ ಸಂಬಂಧಿಸಿ   ನಡೆಯುತ್ತಿರುವ ಪ್ರತಿಭಟನೆಗೆ  ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ಗೆ ಪೆಟ್ಟು ಬಿದ್ದಿದೆ. ಮುಖ್ಯಮಂತ್ರಿಗಳು ಈ ವಾರ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಸಿಪಿಎಂ ಕೇಂದ್ರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಪಿಣರಾಯಿ ದೆಹಲಿಗೆ ತೆರಳಬೇಕಿತ್ತು. 

                   ದೆಹಲಿ ಪ್ರವಾಸವನ್ನು ರದ್ದುಗೊಳಿಸಿರುವ ಪಿಣರಾಯಿ ಜೂನ್ 18-19 ರಂದು ಆನ್‍ಲೈನ್‍ನಲ್ಲಿ ಕೇಂದ್ರ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆಗೆ ಹೆದರಿ ಮುಖ್ಯಮಂತ್ರಿ ದಿಲ್ಲಿ ಭೇಟಿ ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

                  ಇದೇ ವೇಳೆ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಕುಟುಂಬದ ವಿರುದ್ಧ ಸ್ವಪ್ನಾ ಸುರೇಶ್ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಪಿಣರಾಯಿ ವಿಜಯನ್ ಅವರು ತಮ್ಮ ಮಗಳು ವೀಣಾಳ ವ್ಯಾಪಾರದ ಅಗತ್ಯಗಳಿಗಾಗಿ ಶಾರ್ಜಾದ ಆಡಳಿತಗಾರರ ಸಹಾಯವನ್ನು ಕೋರಿದ್ದರು ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ. ಸ್ವಪ್ನಾ ಪ್ರಕಾರ, ಶಾರ್ಜಾದಲ್ಲಿ ಐಟಿ ಕಂಪನಿಯನ್ನು ಪ್ರಾರಂಭಿಸಲು ಸಹಾಯ ಮಾಡಲು ಮುಖ್ಯಮಂತ್ರಿ ಮನವಿ ಮಾಡಿದ್ದರು.

                 ಸ್ವಪ್ನಾ ಹೇಳಿರುವ ವಿಷಯಗಳ ಪ್ರಕಾರ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಫ್ ಹೌಸ್‍ನಲ್ಲಿ ಮುಚ್ಚಿದ ಕೋಣೆಯಲ್ಲಿ ಸಭೆ ನಡೆಸಲಾಯಿತು ಮತ್ತು ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರು ಭಾಗವಹಿಸಿದ್ದರು. ಮುಖ್ಯಮಂತ್ರಿಗಳು ಶಾರ್ಜಾದ ಐಟಿ ಸಚಿವರೊಂದಿಗೆ ಮಾತನಾಡಿದರು. ಆದರೆ ರಾಜಮನೆತನದವರ ವಿರೋಧದಿಂದ ವ್ಯಾಪಾರ ವಹಿವಾಟು ನಡೆಯಲಿಲ್ಲ ಎಂಬುದನ್ನೂ ಸ್ವಪ್ನಾ ಬಹಿರಂಗಪಡಿಸಿದ್ದಾರೆ.

               ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಯುವಮೋರ್ಚಾ ತನ್ನ ಪ್ರಬಲ ಪ್ರತಿವಾದವನ್ನು ಮುಂದುವರೆಸಿದೆ. ನಿನ್ನೆ ಬೆಳಿಗ್ಗೆ, ಪೋಲೀಸರು ಜಲಪಿರಂಗಿ ಬಳಸಿ ಪ್ರತಿಭಟನಕಾರರನ್ನು ನಿಯಂತ್ರಿಸಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries