HEALTH TIPS

ತಕಿಲ್ ನ ಸಂಗೀತ ವಿಸ್ಮಯ ಇನ್ನಿಲ್ಲ: ತಕಿಲ್ ವಿದ್ವಾಂಸ ಕರುಣಾಮೂರ್ತಿ ನಿಧನ

                   ವೈಕಂ: ಖ್ಯಾತ ತಕಿಲ್(ನಾಗಸ್ವರಕ್ಕೆ ಸಂವಾದಿಯಾದ ವಾದ್ಯ) ವಿದ್ವಾಂಸ ಕರುಣಾ ಮೂರ್ತಿ ವಿಧಿವಶರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಪ್ಯಾಂಕ್ರಿಯಾಟೈಟಿಸ್‍ನಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ 2.50ಕ್ಕೆ ಸಾವು ಸಂಭವಿಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

                ವೈಕಂ ಚಳಪ್ಪರಂಬದವರಾದ ಕರುಣಾ ಮೂರ್ತಿ ಅಂತರಾಷ್ಟ್ರೀಯ ಖ್ಯಾತಿಯ ತಕಿಲ್  ವಿದ್ವಾಂಸರು. ಅವರು ವೈಕಂ ದೇವಾಲಯ ಕಲಾಪೀಠದಲ್ಲಿ ಶಿಕ್ಷಕರೂ ಆಗಿದ್ದರು. ತಖಿಲ್‍ನಲ್ಲಿ ಕೀರ್ತನೆಗಳನ್ನು ಹೇಳುವುದರಲ್ಲಿ ಖ್ಯಾತರಾಗಿದ್ದ ಕರುಣಾಮೂರ್ತಿಗೆ ದೇಶ ವಿದೇಶಗಳಲ್ಲಿ ಅನೇಕ ಅಭಿಮಾನಿಗಳಿದ್ದಾರೆ. ಕಾಂಚಿ ಕಾಮಕೋಟಿ ಪೀಠದ ಪ್ರಧಾನ ವಿದ್ವಾಂಸರೂ ಆಗಿದ್ದಾರೆ.

                 ಅವರು ಪತ್ನಿ ಶ್ರೀಲತಾ ಮೂರ್ತಿ, ಮಕ್ಕಳಾದ ಪುತ್ರಿ ಅದಿರಾ ಮೂರ್ತಿ, ಪುತ್ರ ಆನಂದ ಮೂರ್ತಿ ಮತ್ತು ಅಳಿಯ ಮನು ಶಂಕರ್ ಅವರನ್ನು ಅಗಲಿದ್ದಾರೆ. ಮೃತದೇಹವನ್ನು ಬುಧವಾರ ಸಂಜೆ 5 ಗಂಟೆಗೆ ವೈಕಂ ನಿವಾಸಕ್ಕೆ ತರಲಾಯಿತು.  ನಾಳೆ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries