HEALTH TIPS

ಸಿಪಿಎಂ ನಿಂದ ರಾಷ್ಟ್ರಧ್ವಜಾರೋಹಣ: ಸ್ವಾತಂತ್ರ್ಯ ದಿನಾಚರಣೆಯನ್ನು ಇತಿಹಾಸದಲ್ಲಿ ಅಪರೂಪವಾಗಿ ಆಚರಿಸಿದ ಸಿಪಿಐಎಂ ಮತ್ತು ಆರ್.ಎಸ್.ಎಸ್


             ನವದೆಹಲಿ: ಸಿಪಿಎಂ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ದೆಹಲಿಯ ಸಿಪಿಎಂ ಕೇಂದ್ರ ಸಮಿತಿ ಕಚೇರಿ ಎಕೆಜಿ ಭವನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು.
         ಪೆÇಲಿಟ್ ಬ್ಯೂರೋ ಸದಸ್ಯರಾದ ತಪನ್ ಸೇನ್ ಮತ್ತು ನೀಲೋತ್ಪಾಲ್ ಬಸು ಸಮಾರಂಭದಲ್ಲಿ ಭಾಗವಹಿಸಿದ್ದರು.
              ತಿರುವನಂತಪುರದ ಎಕೆಜಿ ಸೆಂಟರ್‍ನಲ್ಲಿ ಎಸ್.ರಾಮಚಂದ್ರನ್ ಪಿಳ್ಳೈ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ಪಕ್ಷದ ಕೇಂದ್ರ ಸಮಿತಿ ಸದಸ್ಯರಾದ ಇಪಿ ಜಯರಾಜನ್ ಮತ್ತು ಥಾಮಸ್ ಐಸಾಕ್ ಉಪಸ್ಥಿತರಿದ್ದರು.
            ದೇಶದ ಅಸ್ತಿತ್ವದ ಮೂಲ ಅಂಶವಾದ ಒಕ್ಕೂಟ ತತ್ವಗಳು ಅರಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಇಂದು ನಾವು ಕಾಣುವ ಎಲ್ಲಾ ಹಕ್ಕುಗಳೂ ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ದೇಶಭಕ್ತರನ್ನು ಸ್ಮರಿಸುವುದನ್ನು ಬಿಟ್ಟು ನಾವು ಮುಂದುವರಿಯಲು ಸಾಧ್ಯವಿಲ್ಲ ಎಂದು ಪಿಣರಾಯಿ ಹೇಳಿದರು.
          ಪಕ್ಷದ ಕಚೇರಿಗಳು ಸೇರಿದಂತೆ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಿಪಿಎಂ ನಿರ್ಧರಿಸಿತ್ತು.  ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‍ಗಳೊಂದಿಗೆ ಇತಿಹಾಸದಲ್ಲಿ ಅಪರೂಪದ ಘಟನೆಯಾಗಿ ಇದು ದಾಖಲಾಯಿತು. ಕೆಲವರು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಟ್ಯಾಗ್ ಮಾಡಿ ಅವರು ಬಂದಾಗ ಇತಿಹಾಸವೇ ಬದಲಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಕಳೆದ ಗಣರಾಜ್ಯೋತ್ಸವ ದಿನವೂ ಸಿಪಿಎಂ ರಾಷ್ಟ್ರಧ್ವಜಾರೋಹಣ ಮಾಡಿ ಸಂಭ್ರಮಿಸಿತ್ತು.
        ಆರ್.ಎಸ್.ಎಸ್ ಕೂಡಾ ರಾಷ್ಟ್ರಧ್ವಜಾರೋಹಣಗೈದು ತನ್ನ ಭಗವಾಧ್ವಜದ ಹೊರತಾಗಿ ಮತ್ತೊಂದು ಧ್ವಜಕ್ಕೆ ಪ್ರಧಾನ್ಯ ನೀಡಿದ್ದು ಇತಿಹಾಸದಲ್ಲಿ ದಾಖಲಾಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries