HEALTH TIPS

ಕಾಂಗ್ರೆಸ್ ಅಧ್ಯಕ್ಷ ಸ್ಥಾನ; ರಾಮನ ಸೇತುವೆಯನ್ನು ಕಟ್ಟಲು ಸಹಾಯ ಮಾಡಿದ ಅಳಿಲ ಸೇವೆಗಷ್ಟೇ ಆಸಕ್ತಿ: ಶಶಿ ತರೂರ್

Top Post Ad

Click to join Samarasasudhi Official Whatsapp Group

Qries


       ತಿರುವನಂತಪುರ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸ್ಪರ್ಧಿಸದಿದ್ದರೆ ಶಶಿ ತರೂರ್ ಸೇರಿದಂತೆ ಇತರರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳು ಬಂದಿದ್ದವು.
      ಇದನ್ನು ಪುಷ್ಠೀಕರಿಸುವಂತೆ ತರೂರ್ ಅವರು ಸ್ವಾಮಿ ವಿವೇಕಾನಂದರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಶಶಿ ತರೂರ್ ಸಿದ್ಧರಿಲ್ಲ. ಅಧ್ಯಕ್ಷ ಚುನಾವಣೆ ಕಾಂಗ್ರೆಸ್ ಪಕ್ಷದ ಒಳಿತಿಗಾಗಿ ಎಂಬುದμÉ್ಟೀ ಅವರ ಪ್ರತಿಕ್ರಿಯೆ.
   "ನನಗೆ ಕೇವಲ ಸುಧಾರಣೆಯಲ್ಲಿ ನಂಬಿಕೆಯಿಲ್ಲ; ನಾನು ಬೆಳವಣಿಗೆಯನ್ನು ನಂಬುತ್ತೇನೆ. ನಮ್ಮ ಸಮಾಜಕ್ಕೆ 'ನೀವು ಈ ರೀತಿಯಲ್ಲಿ ಚಲಿಸಬೇಕು' ಎಂದು ನಾನು ನಿರ್ದೇಶಿಸಲು ಧೈರ್ಯವಿಲ್ಲ. ಸ್ವಾಮಿ ವಿವೇಕಾನಂದರ ಮಾತುಗಳನ್ನು ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
        ಕಾಂಗ್ರೆಸ್‍ನ ಸುಧಾರಣೆ ಮುಖ್ಯವಲ್ಲ, ಬೆಳವಣಿಗೆ ಮುಖ್ಯ ಎಂದು ಸಂಸದರು ಹೇಳಿದ್ದಾರೆ. ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ ಎಂದ ಅವರು, ಸಾಮಾನ್ಯ ಕಾಂಗ್ರೆಸ್ಸಿಗರಾಗಿ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತೇನೆ ಎಂದು ಸ್ಪಷ್ಟಪಡಿಸುವ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಗಾಂಧಿ ಕುಟುಂಬ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಶಶಿ ತರೂರ್ ಜೊತೆಗೆ ಅಶೋಕ್ ಗೆಹ್ಲೋಟ್ ಹೆಸರು ಕೇಳಿ ಬರುತ್ತಿದೆ.




Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries