HEALTH TIPS

ಆಕೆ ಪರಿಶಿಷ್ಟ ಜಾತಿಯ ಮಹಿಳೆ ಎಂಬ ಅರಿವಿನಿಂದ ಮಾಡಿದ ಅಪರಾಧವಲ್ಲ; ಎಸ್.ಸಿ.ಎಸ್.ಟಿ ಕಾಯಿದೆ ಜಾತಿ ಇಲ್ಲದವರಿಗೆ ಬಾಧಕವಲ್ಲ: ವಿಚಿತ್ರ ನ್ಯಾಯ ನೀಡಿದ ನ್ಯಾಯಾಲಯ

Top Post Ad

Click to join Samarasasudhi Official Whatsapp Group

Qries


                    ಕೋಝಿಕ್ಕೋಡ್: ಹೋರಾಟಗಾರ ಸಿವಿಕ್ ಚಂದ್ರು ವಿರುದ್ಧದ ಮೊದಲ ಪ್ರಕರಣದಲ್ಲಿ ಜಾಮೀನು ನೀಡಲು ನ್ಯಾಯಾಲಯ ತೆಗೆದುಕೊಂಡಿರುವ ನಿಲುವು ಟೀಕೆಗೆ ಗುರಿಯಾಗುತ್ತಿದೆ.
                 ಜಾತಿ ಇಲ್ಲದ ವ್ಯಕ್ತಿಯ ವಿರುದ್ಧ ಎಸ್‍ಸಿ ಎಸ್‍ಟಿ ಕಾಯ್ದೆ ಬಾಧಕವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಿವಿಕ್ ಚಂದ್ರನ್ ಅವರ ಎಸ್ ಎಸ್ ಎಲ್ ಸಿ ಪುಸ್ತಕದಲ್ಲಿ ಜಾತಿ ದಾಖಲಾಗಿಲ್ಲ. ಈ ಪರಿಸ್ಥಿತಿಯಲ್ಲಿ ಅವರ ವಿರುದ್ಧದ ಪ್ರಕರಣ ಬಾಧವಾಗಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಆದರೆ ಈ ಉಲ್ಲೇಖವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಗೆ ವಿರುದ್ಧವಾಗಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.
           ದಲಿತ ಮಹಿಳೆ, ಯುವ ಲೇಖಕಿ ಮತ್ತು ಶಿಕ್ಷಕಿಯ ಕಿರುಕುಳದ ದೂರಿನ ಮೇರೆಗೆ ಸಿವಿಕ್ ಚಂದ್ರನ್ ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಆಕೆ ಪರಿಶಿಷ್ಟ ಜಾತಿ ಮಹಿಳೆ ಎಂದು ತಿಳಿದು ಹಿಂಸಾಚಾರ ನಡೆದಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಸಂವಿಧಾನ ಶಿಲ್ಪಿಗಳೂ ಸೇರಿದಂತೆ ಜಾತಿ ರಹಿತ ಸಮಾಜವನ್ನು ಗುರಿಯಾಗಿಸಲಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಅವರು ಜೀವನದ ಬಗ್ಗೆ ಸಂವೇದನಾಶೀಲರಲ್ಲ ಎಂದು ನ್ಯಾಯಾಲಯವು ಸೂಚಿಸಿದೆ.
           ಸಿವಿಕ್ ಚಂದ್ರನ್ ಮಹಿಳೆಗೆ ಕಳುಹಿಸಿದ ವಾಟ್ಸ್ಆ್ಯಪ್ ಚಾಟ್‍ಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿದರೂ ಪರಿಶಿಷ್ಟ ಜಾತಿಗಳ ಕಿರುಕುಳ ನಿμÉೀಧ ಕಾಯ್ದೆಯು ನಿಲ್ಲುವುದಿಲ್ಲ ಎಂಬ ಪ್ರತಿವಾದಿಯ ವಾದವನ್ನು ಪರಿಗಣಿಸಿದ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದೆ.



 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries