HEALTH TIPS

ವಿದೇಶ ಪ್ರವಾಸದಿಂದ ಭಾರೀ ಲಾಭ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

Top Post Ad

Click to join Samarasasudhi Official Whatsapp Group

Qries


          ತಿರುವನಂತಪುರ: ವಿದೇಶ ಪ್ರವಾಸ ವಿವಾದದ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಸುದ್ದಿಗೋಷ್ಠಿ ನಡೆಸಿ ಸಮರ್ಥನೆ ನೀಡಿದ್ದಾರೆ. ಮುಖ್ಯಮಂತ್ರಿ, ಅವರ ಕುಟುಂಬ ಹಾಗೂ ಸಚಿವರು ಕೈಗೊಂಡಿರುವ ಯುರೋಪ್ ಪ್ರವಾಸದಿಂದ ಕೇರಳಕ್ಕೆ ಸಾಕಷ್ಟು ಲಾಭವಾಗಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
           ಯುರೋಪ್ ಪ್ರವಾಸವು ಮನರಂಜನಾ ಪ್ರವಾಸ ಎಂಬ ತೀವ್ರ ಟೀಕೆಗಳ ನಡುವೆಯೇ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ಕರೆದು ಕೇರಳದ ಅನುಕೂಲಕ್ಕಾಗಿ ಈ ಪ್ರವಾಸ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
          ವಿದೇಶ ಪ್ರವಾಸದ ಕುರಿತು ವಿವರಿಸಲು ಮುಖ್ಯಮಂತ್ರಿಗಳ ಸಮಜಾಯಿಷಿಗೆ ಪತ್ರಿಕಾಗೋಷ್ಠಿ ಎಂದು ಹೆಸರಿಸಿ ವಿಶೇಷಿಸಲಾಯಿತು. ರಾಜ್ಯದ ಪ್ರಗತಿಗಾಗಿ ಪಯಣ ನಡೆಸಲಾಗಿದೆ. ಪ್ರಯಾಣದಿಂದ ಗುರಿಗಿಂತ ಹೆಚ್ಚಿನ ಲಾಭಗಳು ಲಭಿಸಿದವು. ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡಿದೆ. ವಿದೇಶ ಪ್ರವಾಸವು ಕೇವಲ ರಾಜ್ಯದ ಹಿತವನ್ನು ಗುರಿಯಾಗಿರಿಸಿಕೊಂಡಿದೆ ಎಂದು ಅವರು ಹೇಳಿದರು.
          ವಿದೇಶೀ ಕಲ್ಯಾಣ ಮತ್ತು ಹೂಡಿಕೆ ಕ್ರೋಢೀಕರಣವು ಪ್ರಯಾಣದ ಮೂಲಕ ಸಾಧ್ಯವಾಯಿತು. ಕೇರಳವನ್ನು ಉನ್ನತ ಶಿಕ್ಷಣ ಕೇಂದ್ರವನ್ನಾಗಿ ಮಾಡಲು ಅನಿವಾಸಿ ಸಂಸ್ಥೆಗಳಿಂದ ಸಹಾಯ ಕೋರಲಾಗಿದೆ. ಕೊಚ್ಚಿಯಿಂದ ಆರಂಭವಾಗುವ ಗಿಫ್ಟ್ ಸಿಟಿಯಲ್ಲಿ ಹೂಡಿಕೆ ಸಾಧ್ಯತೆ ಕುರಿತು ಚರ್ಚಿಸಲಾಯಿತು. ಯುಕೆಗೆ ಕಾರ್ಮಿಕ ವಲಸೆಗೆ ಅನುಕೂಲವಾಗುವಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆರೋಗ್ಯ ಕಾರ್ಯಕರ್ತರು ಯುಕೆಗೆ ವಲಸೆ ಹೋಗುವುದನ್ನು ಸುಲಭಗೊಳಿಸಲು ಚರ್ಚೆಗಳು ನಡೆದವು. ಯುಕೆ ಎಂಪ್ಲಾಯ್‍ಮೆಂಟ್ ಫೆಸ್ಟ್ ಅನ್ನು ನವೆಂಬರ್‍ನಲ್ಲಿ ಆಯೋಜಿಸಲಾಗುವುದು ಮತ್ತು ಯುರೋಪಿಯನ್ ಪ್ರವಾಸವು ಕೇರಳದ ಶಿಕ್ಷಣ ಮತ್ತು ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ.



 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries