HEALTH TIPS

ಹಣಕಾಸಿನ ಬಿಕ್ಕಟ್ಟು; ಎರಡು ತಿಂಗಳಿಂದ ವಿಳಂಬವಾಗಿದ್ದ ಕಲ್ಯಾಣ ಪಿಂಚಣಿ ಮುಂದಿನ ತಿಂಗಳು ವಿತರಣೆ

Top Post Ad

Click to join Samarasasudhi Official Whatsapp Group

Qries


             ತಿರುವನಂತಪುರಂ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಾಕಿ ಇರುವ ಕಲ್ಯಾಣ ಪಿಂಚಣಿಯನ್ನು ಮುಂದಿನ ತಿಂಗಳ ಎರಡನೇ ವಾರದಲ್ಲಿ ವಿತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
           ಇದಕ್ಕಾಗಿ ಹಣಕಾಸು ಇಲಾಖೆ 1800 ಕೋಟಿ ರೂ.ನೀಡಬೇಕಿದೆ. ಅಕ್ಟೋಬರ್ ಮತ್ತು ನವೆಂಬರ್ ಮೊತ್ತವನ್ನು ಒಟ್ಟಿಗೆ ಪಾವತಿಸಲಾಗುತ್ತದೆ. ಎರಡು ತಿಂಗಳಿಂದ ಕಲ್ಯಾಣ ಪಿಂಚಣಿ ವಿತರಣೆಯಾಗಿಲ್ಲ ಎಂಬ ದೂರಿನ ಮಧ್ಯೆ  ಹಣಕಾಸು ಇಲಾಖೆ ವಿವರಣೆ ನೀಡಿದೆ.
           ಎರಡು ತಿಂಗಳಿಗೂ ಹೆಚ್ಚು ಕಾಲ ವಿಳಂಬವಾಗಿರುವ ಕಲ್ಯಾಣ ಪಿಂಚಣಿಯನ್ನು ಡಿಸೆಂಬರ್ ಎರಡನೇ ವಾರದಲ್ಲಿ ನೀಡಲಾಗುವುದು. ಹಣಕಾಸು ಇಲಾಖೆಯಿಂದ 1800 ಕೋಟಿ ಮಂಜೂರಾಗಿದೆ. ಈ ಸಂಬಂಧ ನಿನ್ನೆ ಆದೇಶ ಹೊರಬಿದ್ದಿದೆ. ಡಿಸೆಂಬರ್ ತಿಂಗಳ ಪಿಂಚಣಿಯನ್ನು ತಿಂಗಳಾಂತ್ಯದಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ಸಾಲ ಪಡೆದ 2000 ಕೋಟಿ ರೂ.ಗಳಿಂದ ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಪಿಂಚಣಿ ವಿತರಣೆ ಸ್ಥಗಿತಗೊಂಡಿದೆ.
          ಮೊದಲ ಪಿಣರಾಯಿ ಸರ್ಕಾರವು ಓಣಂ ಅಥವಾ ಕ್ರಿಸ್‍ಮಸ್ ಹಬ್ಬದಂದು ಮೂರ್ನಾಲ್ಕು ತಿಂಗಳ ಕಲ್ಯಾಣ ಪಿಂಚಣಿಯನ್ನು ಒಟ್ಟಿಗೆ ನೀಡುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೊಟ್ ಬ್ಯಾಂಕ್ ಗುರಿಯಾಗಿಟ್ಟುಕೊಂಡು ಪ್ರತಿ ತಿಂಗಳು ನೀಡಲು ನಿರ್ಧರಿಸಲಾಗಿತ್ತು. ಇದು ಸರ್ಕಾರದ ಆರ್ಥಿಕ ಸ್ಥಿತಿಗತಿಯನ್ನು ಅಂದಾಜಿಸದೇ ಮಾಡಿರುವ ಕ್ರಮ ಎಂಬ ತೀವ್ರ ಟೀಕೆ ವ್ಯಕ್ತವಾಗಿತ್ತು.
           ಸುಮಾರು 60 ಲಕ್ಷ ಜನರಿಗೆ ತಿಂಗಳಿಗೆ 1600 ರೂಪಾಯಿಗಳ ಕಲ್ಯಾಣ ಪಿಂಚಣಿ ನೀಡಲಾಗುತ್ತದೆ. ಏತನ್ಮಧ್ಯೆ, ರಾಜ್ಯದ ಸಾಲದ ಮಿತಿ ಮುಂದಿನ ತಿಂಗಳು ಮುಕ್ತಾಯಗೊಳ್ಳುತ್ತದೆ. ಹೊಸ ವರ್ಷದಲ್ಲಿ ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಲಿದೆ ಎಂದು ಅಂದಾಜಿಸಲಾಗಿದೆ.



 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries