HEALTH TIPS

ಮಕರಸಂಕ್ರಮಣ ಉತ್ಸವಕ್ಕಾಗಿ ತೆರೆದುಕೊಂಡ ಶಬರಿಮಲೆ ಗರ್ಭಗುಡಿಬಾಗಿಲು: ಜ.14ರಂದು ಮಕರಜ್ಯೋತಿ ದರ್ಶನ



                ಪತ್ತನಂತಿಟ್ಟ  : ಮಂಡಲ ಪೂಜೆಯ ನಂತರ ಮೂರು ದಿವಸಗಳ ಕಾಲ ಮುಚ್ಚುಗಡೆಗೊಂಡಿದ್ದ ಶಬರಿಮಲೆ ಶ್ರೀ ಅಯ್ಯಪ್ಪ ದೇಗುದ ಗರ್ಭಗುಡಿ ಬಾಗಿಲು ಮಕರಸಂಕ್ರಮಣ ಪೂಜೆಗಾಗಿ ಶುಕ್ರವಾರ ತೆರೆಯಲಾಯಿತು. ಸಂಜೆ 5ಕ್ಕೆ ತಂತ್ರಿ ಕಂಠರರ್ ರಾಜೀವರ್ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕರು ಗರ್ಭಗುಡಿ ಬಾಗಿಲು ತೆರೆದು ದೀಪಾರಾಧನೆ ನಡೆಸಿದರು. ಡಿ. 31ರಿಂದ ತುಪ್ಪಾಭಿಷೇಕ ನಡೆಯಲಿದೆ.
         ಜ. 14ರಂದು ಮಕರಜ್ಯೋತಿ ದರ್ಶನವಾಗಲಿದ್ದು, ಉತ್ಸವದ ಅಂಗವಾಗಿ ಜ. 11ರಂದು ಎರುಮೇಲಿ ಪೇಟತುಳ್ಳಲ್ ನಡೆಯಲಿದೆ. 12ರಂದು ಪಂದಳ ಅರಮನೆಯಿಂದ ಪವತ್ರ ಆಭರಣದ ಶೋಭಾಯಾತ್ರೆ ಹೊರಡಲಿದ್ದು, ಪಾರಂಪರಿಕ ಕಾನನ ಹಾದಿಮೂಲಕ ಸಾಗಿ 14ರಂದು ಸನ್ನಿದಾನ ತಲುಪಲಿದೆ. 13ರಂದು ಪಂಪಾ ವಿಳಕ್ಕ್ ಹಾಗೂ ಪಂಪಾ ಔತಣಕೂಟ ನಡೆಯಲಿದೆ.ಜ. 19ರ ವರೆಗೆ ಅಯ್ಯಪ್ಪ ಭಕ್ತಾದಿಗಳಿಗೆ ಕ್ಷೇತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 20ರಂದು ಬೆಳಗ್ಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಮಂಡಲ ಉತ್ಸವ ಕಾಲಾವಧಿಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಸನ್ನಿದಾನ ತಲುಪಿರುವ ಹಿನ್ನೆಲೆಯಲ್ಲಿ ಮಕರಸಂಕ್ರಮಣ ಪೂಜೆಗೆ ಹೆಚ್ಚಿನ ಸಿದ್ಧತೆ ನಡೆಸಲಾಗುತ್ತಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries