ಕಾಸರಗೋಡು: ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಸಂಪೂರ್ಣ ಡಿಜಿಟಲ್ ಸಾಕ್ಷರತೆಯತ್ತ ಜಿಲ್ಲೆ ಸಾಗುತ್ತಿರುವುದಾಗಿ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ಕುರಿತು ಚರ್ಚಿಸಿದರು.
ಬ್ಯಾಂಕಿಂಗ್, ಸರ್ಕಾರಿ ಸೇವೆಗಳಂತಹ ಮೊಬೈಲ್ ಫೆÇೀನ್ ಬಳಸಿ ಡಿಜಿಟಲ್ ಮಾಹಿತಿಯನ್ನು ಕಲಿಯುವುದು, ಇತರರಿಗೆ ಜ್ಞಾನವನ್ನು ನೀಡುವುದು ಮತ್ತು ಅದನ್ನು ಅನ್ವಯಿಸುವುದು ಗುರಿಯಾಗಿದೆ. ಯೋಜನೆಗಾಗಿ 10 ಗಂಟೆಗಳ ಮಾಡ್ಯೂಲ್ಗಳ ಸೆಟ್ ಅನ್ನು ತಯಾರಿಸಲಾಗುತ್ತದೆ. ಮಾಡ್ಯೂಲ್ ಕಾರ್ಯಾಗಾರವು ಜನವರಿ 16 ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಕ್ಷಯ, ಕೈಟ್, ಜಿಲ್ಲಾ ಸಾಕ್ಷರತಾ ಮಿಷನ್, ಗ್ರಂಥಾಲಯ ಮಂಡಳಿ, ಕುಟುಂಬಶ್ರೀ ಮೊದಲಾದವರು ಭಾಗವಹಿಸಲಿದ್ದಾರೆ. ಡಿಜಿಟಲ್ ಸಾಕ್ಷರತೆ ಕಲಿಯುವವರ ಮಾಹಿತಿ ಸಂಗ್ರಹವನ್ನು ಜನವರಿ 26 ರಂದು ಮಾಡಲಾಗುತ್ತದೆ. 26ರಂದು ಬೆಳಗ್ಗೆ ಜಿಲ್ಲಾ ಮಟ್ಟದ ಹಾಗೂ ಗ್ರಾ.ಪಂಪಂಚಾಯಿತಿಗಳಲ್ಲೂ ಸಮೀಕ್ಷೆ ತೆರೆಯಲಾಗುವುದು. ವಾರ್ಡ್ ನೇಬರ್ಹುಡ್ ಗ್ರೂಪ್ ಮಟ್ಟದಲ್ಲಿ ಲೇಬರ್ ಕೌನ್ಸಿಲ್ನಲ್ಲಿ ನೋಂದಾಯಿಸಲ್ಪಟ್ಟ ವ್ಯಕ್ತಿಗಳು ತರಬೇತಿಯನ್ನು ನಡೆಸುತ್ತಾರೆ. ಇದಕ್ಕಾಗಿ ವಿವಿಧ ಹಂತಗಳಲ್ಲಿ ಸಂಘಟನಾ ಸಮಿತಿ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು. ಸಾಮೂಹಿಕ ಅಭಿಯಾನವನ್ನು ಕೈಗೊಳ್ಳಲು ಕುಟುಂಬಶ್ರೀಯ ಸಹಕಾರವನ್ನು ಪಡೆಯಲಾಗುವುದು. ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯಿತಿ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆ ಜಾರಿಗೊಳಿಸಿದೆ. ಆನ್ಲೈನ್ ಬ್ಯಾಂಕಿಂಗ್ ವಹಿವಾಟು ಸೇರಿದಂತೆ ವಿವಿಧ ಡಿಜಿಟಲ್ ತಂತ್ರಜ್ಞಾನದ ಮಾಹಿತಿಯನ್ನು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಶಕುಂತಲಾ, ಎಸ್. ಎನ್. ಸರಿತಾ, ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ. ವತ್ಸಲನ್, ಪಂಚಾಯಿತಿ ಅಧ್ಯಕ್ಷರುಗಳಾದ ಕೆ.ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೂಸುಫ್ ಹೇರೂರು, ಮಡಿಕೈ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ರಮಾ, ಜಿಲ್ಲಾ ಪಂಚಾಯಿತಿ ಯೋಜನಾ ಸಮಿತಿ ಉಪಾಧ್ಯಕ್ಷ ಕೆ.ಬಾಲಕೃಷ್ಣನ್, ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು, ಜಿಲ್ಲಾ ಐಟಿ ಮಿಷನ್ ಸಂಯೋಜಕ ಎಸ್.ನಿವೇದ್, ಕೈಟ್ ಪ್ರತಿನಿಧಿ ರೇಗಿ ಜೋಸೆಫ್ ಉಪಸ್ಥಿತರಿದ್ದರು.
ಸಂಪೂರ್ಣ ಡಿಜಿಟಲ್ ಸಾಕ್ಷರತೆಯತ್ತ ಕಾಸರಗೋಡು ಜಿಲ್ಲೆ-26ರಂದು ಸಮೀಕ್ಷೆ
0
January 12, 2023