HEALTH TIPS

ಕಾಂಗ್ರೆಸ್ ಮಹಾಧಿವೇಶನ: ಭಾರತ್‌ ಜೋಡೊ ಯಾತ್ರೆ ಯಶಸ್ಸಿನಿಂದ ಹೆಚ್ಚಿದ ಉತ್ಸಾಹ

 

            ನವದೆಹಲಿ: ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಏಕತೆ ಸಾಧಿಸುವುದು ಹೇಗೆ ಹಾಗೂ ಮೈತ್ರಿಕೂಟ ರಚನೆಗೆ ಸಂಬಂಧಿಸಿ ಪ್ರಾದೇಶಿಕ ಪಕ್ಷಗಳ ನಿಲುವುಗಳ ಕುರಿತು ಛತ್ತೀಸಗಢದ ನವ ರಾಯಪುರದಲ್ಲಿ ಇದೇ ಶುಕ್ರವಾರದಿಂದ (ಫೆ.24) ಮೂರು ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್‌ ಪಕ್ಷದ ಮಹಾಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆ ಇದೆ.

                ವಿರೋಧ ಪಕ್ಷಗಳು ರಚಿಸುವ ಯಾವುದೇ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಪಾತ್ರ ಇರಲೇಬೇಕು ಎಂಬುದು ಪಕ್ಷದ ಸ್ಪಷ್ಟ ನಿಲುವಾಗಿದೆ. ಕಾಂಗ್ರೆಸ್‌ ಅನ್ನು ಹೊರಗಿಟ್ಟು ವಿರೋಧ ಪಕ್ಷಗಳ ಏಕತೆ ಸಾಧಿಸುವ ಯಾವುದೇ ಪ್ರಯತ್ನಗಳು ಯಶಸ್ವಿ ಆಗುವುದಿಲ್ಲ ಎಂಬ ಮಾತನ್ನು ಹಲವು ಬಾರಿ ಹೇಳಿರುವ ಪಕ್ಷದ ನಾಯಕರು, ಮಹಾಧಿವೇಶನದ ವೇದಿಕೆಯಲ್ಲೂ ಇದೇ ಮಾತನ್ನು ಪುನರುಚ್ಚರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

                                 'ಯಾರ ಪ್ರಮಾಣಪತ್ರವೂ ಬೇಡ'

                'ಭಾರತ್‌ ಜೋಡೊ ಯಾತ್ರೆಯ ಯಶಸ್ಸಿನಿಂದ ಬೀಗುತ್ತಿರುವ ಕಾಂಗ್ರೆಸ್‌, ವಿರೋಧ ಪಕ್ಷಗಳ ಏಕತೆ ಸಾಧಿಸುವ ಪ್ರಯತ್ನದ ಮುಂದಾಳತ್ವ ವಹಿಸಿಕೊಳ್ಳಬೇಕು' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇತ್ತೀಚೆಗೆ ಹೇಳಿದ್ದರು. ನಿತೀಶ್‌ ಕುಮಾರ್‌ ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ನ ಕೆಲ ನಾಯಕರು ಸ್ವಾಗತಿಸಿದ್ದರೂ, ಮುಂದಾಳತ್ವ ವಹಿಸುವ ಸಲಹೆ ಬಗ್ಗೆ ಪಕ್ಷದಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

              ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, 'ಕಾಂಗ್ರೆಸ್‌ ಪಕ್ಷಕ್ಕೆ ತಾನು ವಹಿಸಬೇಕಾದ ಪಾತ್ರದ ಕುರಿತು ಸ್ಪಷ್ಟ ಅರಿವು ಇದೆ. ನಾವು ಮುಂದಾಳತ್ವ ವಹಿಸಬೇಕು ಎಂದು ಯಾರೂ ನಮಗೆ ಪ್ರಮಾಣಪತ್ರ ನೀಡುವ ಅಗತ್ಯ' ಎಂದು ತಿರುಗೇಟು ನೀಡಿದ್ದಾರೆ.

                     'ಬಿಜೆಪಿಯನ್ನು ಎದುರಿಸುವ ವಿಷಯದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಮಹಾಧಿವೇಶನದಲ್ಲಿ ಚರ್ಚಿಸಲಾಗುವುದು' ಎಂದೂ ಹೇಳಿದ್ದಾರೆ.

                  'ವಿರೋಧ ಪಕ್ಷಗಳ ಏಕತೆ ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಹಲವು ರಾಜಕೀಯ ಪಕ್ಷಗಳ ಜೊತೆ ಸಂಪರ್ಕದಲ್ಲಿದೆ. 2024ರ ಲೋಕಸಭಾ ಚುನಾವಣೆ ಹೊತ್ತಿಗೆ ವಿರೋಧ ಪಕ್ಷಗಳ ಏಕತೆ ಸಾಧಿಸುವುದು ಖಚಿತ' ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

         'ಕಾಂಗ್ರೆಸ್‌ ಪಕ್ಷವು ಮೈತ್ರಿಕೂಟದ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ. ಕೇರಳ, ಮಹಾರಾಷ್ಟ್ರ, ಜಾರ್ಖಂಡ, ಬಿಹಾರ, ತ್ರಿಪುರಾ ಹಾಗೂ ತಮಿಳುನಾಡುಗಳಲ್ಲಿ ಪಕ್ಷವು ಮೈತ್ರಿ ಹೊಂದಿದೆ' ಎಂದು ಮೂಲಗಳು ಹೇಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries