HEALTH TIPS

ಕೇರಳದ ವಿಧಾನಸಭೆಯಲ್ಲಿ ಮೊಳಗಿದ 'ಮಂಕು ತಿಮ್ಮನ ಕಗ್ಗ'




  ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕಾಸರಗೋಡಿನ ಅವಗಣನೆ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಮಡರು.
ಎರಡನೇ ದಿನ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು ಕೆ.ಎನ್ ಬಾಲಗೋಪಾಲ್ ಮಂಡಿಸಿದ ಬಜೆಟ್ ಚರಿತ್ರೆಯಲ್ಲೇ ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಟೀಕಿಸಿದರು.
ಇದು ಕಣ್ಣೂರು ವರೆಗೆ ಮಾತ್ರ ಚಾಲನೆಯಲ್ಲಿರುವ ಜನಶತಾಬ್ದಿ ಬಜೆಟ್ ಆಗಿದೆ. ಅಚ್ಯುತ ಮೆನನ್ ಮಂಡಿಸಿದ ಬಜೆಟ್‍ನ ನಂತರ ಕೇರಳದ ವಿತ್ತಸಚಿವರುಗಳು ಮಂಡಿಸಿದ ಬಜೆಟ್‍ಗಳಲ್ಲಿ ಕೆ.ಎನ್ ಬಾಲಗೋಪಾಲ್ ಮಂಡಿಸಿದ ಜನದ್ರೋಹಕರ ಹಾಗೂ ಕಳಪೆ ಬಜೆಟ್ ಇದಾಗಿದೆ. ಬಜೆಟ್‍ನಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ನೋಡಿದರೆ, ಕಾಸರಗೋಡು ಕೇರಳದ ಭೂಪಟದಿಂದ ಹೊರಗಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಒಂಬತ್ತುವರ್ಷದ ಹಿಂದೆ ಶಿಲಾನ್ಯಾಸ ನಡೆಸಲಾದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಈ ಬಾರಿ ಬಜೆಟ್‍ನಲ್ಲಿ ಚಿಕ್ಕಾಸೂ ಮೀಸಲಿರಿಸಿಲ್ಲ. ಟಾಟಾ ಆಸ್ಪತ್ರೆ ಅಭಿವೃದ್ಧಿಗೆ ಟೋಕನ್ ಮೊತ್ತವನ್ನೂ ಮೀಸಲಿರಿಸಿಲ್ಲ. ಈ ಸಂದರ್ಭ ಡಿವಿಜಿ ಅವರ ಮಂಕು ತಿಮ್ಮನ ಕಗ್ಗವನ್ನು ಅತ್ಯಂತ ಮನೋಜ್ಞವಾಗಿ ಪ್ರಸ್ತಾವಿಸುವ ಮೂಲಕ ಶಾಸಕ ಎ.ಕೆ.ಎಂ ಅಶ್ರಫ್ ವಿಧಾನಸಭಾ ಅಧ್ಯಕ್ಷರು ಹಾಗೂ ಸದಸ್ಯರ ಗಮನ ಸಎಳೆದಿದ್ದಾರೆ. ''ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ-ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್
ಮ''ಎಂಬುದಾಗಿ ವಾಚಿಸುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಅಭಿವೃದ್ಧಿಕಾರ್ಯಗಳು ಬಡಜನತೆಯ ಕಣ್ಣೀರು ಒರೆಸುವ ರೀತಿಯಲ್ಲಿರಲಿ. ಜನಸಾಮಾನ್ಯರೆಲ್ಲರನ್ನು ಒಟ್ಟುಸೇರಿಸಿ ತಳಮಟ್ಟದ ವರೆಗೂ ತಲುಪುವ ರೀತಿಯಲ್ಲಿ ಅಭಿವೃದ್ಧಿಕಾರ್ಯಗಳು ನಡೆದಾಗ ಮಾತ್ರ ಸುಧಾರಣೆ ಸಧ್ಯ ಎಂದು ಪರಾಮರ್ಶಿಸಿದರು.





 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries