HEALTH TIPS

ಬಜಕೂಡ್ಲು ಗೋಶಾಲೆಯಲ್ಲಿ ಬೆರಣಿಯನ್ನು ತಟ್ಟಿ ವಿದ್ಯಾರ್ಥಿಗಳ ಸಂಭ್ರಮ

Top Post Ad

Click to join Samarasasudhi Official Whatsapp Group

Qries

                 ಪೆರ್ಲ: ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯುತ್ತಿರುವ 4 ದಿನಗಳ ಶಿಬಿರ `ಜೀವನಬೋಧೆ` 23' ರ ಪ್ರಯುಕ್ತ ಶುಕ್ರವಾರ ಅಪರಾಹ್ನ ಬಜಕೂಡ್ಲು ಗೋಶಾಲೆಗೆ ಭೇಟಿ ನೀಡಲಾಯಿತು.


          ಮಧ್ಯಾಹ್ನ ಭೋಜನ ಸ್ವೀಕರಿಸಿದ ವಿದ್ಯಾರ್ಥಿಗಳು ಗೋಶಾಲೆಯ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪುಟ್ಟ ಕರುಗಳ ಜೊತೆ ಆಟವಾಡುತ್ತಾ, ಗೋಶಾಲೆಯನ್ನು ಸ್ವಚ್ಛಗೊಳಿಸಿದರು. ಗೋವಿಗೆ ಸ್ನಾನವನ್ನು ಮಾಡಿಸಿದರು. ಗೋವಿನ ಸಗಣಿಯನ್ನು ತೆಗೆದು, ನಂತರ ಅದನ್ನು ತಟ್ಟಿ ಬೆರಣಿಯನ್ನು ಮಾಡಿರುವುದು ವಿದ್ಯಾರ್ಥಿಗಳಿಗೆ ವಿಶೇಷ ಅನುಭವವಾಗಿತ್ತು. ಗೋಶಾಲೆಯಲ್ಲಿ ತಯಾರಾಗುತ್ತಿರುವ ವಿವಿಧ ಉತ್ಪನ್ನಗಳನ್ನು ಪರಿಚಯಮಾಡಲಾಯಿತು. ಬೆಳಗ್ಗೆ ಸತ್ಯನಾರಾಯಣ ಭಟ್ ಮೊಗ್ರ ವಿಶೇಷ ತರಗತಿಯನ್ನು ನಡೆಸಿಕೊಟ್ಟರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries