HEALTH TIPS

ಕೇರಳದಲ್ಲಿ ಇಂದು ಸಾಮೂಹಿಕ ನಿವೃತ್ತಿ; ಒಂದೇ ದಿನ ನಿವೃತ್ತರಾದ 11,801 ಮಂದಿ ಸರ್ಕಾರಿ ನೌಕರರು

                   ತಿರುವನಂತಪುರಂ: ರಾಜ್ಯದಲ್ಲಿ ಇಂದು ಸರ್ಕಾರಿ ನೌಕರರ ಬೃಹತ್ ತಂಡವೇ  ನಿವೃತ್ತಿಯಾಗುತ್ತಿದ್ದು, ವಿಶೇಷತೆಯಾಗಿ ಗಮನಿಸಲ್ಪಟ್ಟಿದೆ.  11,801 ಮಂದಿ ಇಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

                    ಹೆಚ್ಚಿನವರು ಆರೋಗ್ಯ, ಶಿಕ್ಷಣ ಮತ್ತು ಕಂದಾಯ ಇಲಾಖೆಗಳಿಂದ ನಿವೃತ್ತರಾಗಿದ್ದಾರೆ. ಈ ವರ್ಷ ಒಟ್ಟು 21,537 ಮಂದಿ ನಿವೃತ್ತರಾಗುತ್ತಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಇಂದು ಸರ್ಕಾರಿ ಸೇವೆಯಿಂದ ಒಟ್ಟಿಗೆ ನಿವೃತ್ತರಾಗುತ್ತಿದ್ದಾರೆ.

                     ರಾಜ್ಯದಲ್ಲಿ ಶಾಲಾ ಪ್ರವೇಶಕ್ಕೆ ಪೂರ್ವಭಾವಿಯಾಗಿ ಮೇ ತಿಂಗಳಲ್ಲಿ ಜನ್ಮದಿನಾಂಕವನ್ನು ದಾಖಲಿಸುವ ಪದ್ಧತಿ ಇದ್ದುದರಿಂದಲೇ ಇಷ್ಟು ಮಂದಿಯ ಸಾಮೂಹಿಕ ನಿವೃತ್ತಿ ಈ ದಿನ ನಡೆದಿದೆ. ಇಲಾಖೆಗಳ ವಿವಿಧ ಹುದ್ದೆಗಳಿಗೆ ಅನುಗುಣವಾಗಿ 15 ರಿಂದ 80 ಲಕ್ಷ ರೂ.ವರೆಗೆ ಪಾವತಿಸಬೇಕಾಗಿರುವುದರಿಂದ ಸರಕಾರ ಸುಮಾರು 1500 ಕೋಟಿ ರೂ. ನಿವೃತ್ತಿ ವೇತನ ವಿನಿಯೋಗಿಸಬೇಕಾಗುತ್ತದೆ. ಆದರೆ ಅವರಿಗೆ ಸವಲತ್ತುಗಳನ್ನು ನೀಡಲು ಯಾವುದೇ ಅಡ್ಡಿಯಾಗುವುದಿಲ್ಲ ಮತ್ತು ಮೊತ್ತವನ್ನು ತಡೆಹಿಡಿಯುವ ಪರಿಸ್ಥಿತಿ ಇಲ್ಲ ಎಂದು ರಾಜ್ಯ ಹಣಕಾಸು ಇಲಾಖೆ ಮಾಹಿತಿ ನೀಡಿದೆ.

                 ಏತನ್ಮಧ್ಯೆ, ಕೇರಳ ಪೊಲೀಸರಿಂದ 3 ಡಿಜಿಪಿಗಳು ಬುಧವಾರ ನಿವೃತ್ತಿಯಾಗಲಿದ್ದಾರೆ. ಅಗ್ನಿಶಾಮಕ ದಳದ ಮುಖ್ಯಸ್ಥೆ ಬಿ.ಸಂಧ್ಯಾ, ಅಬಕಾರಿ ಆಯುಕ್ತ ಆರ್.ಆನಂದಕೃಷ್ಣನ್ ಮತ್ತು ಎಸ್‍ಪಿಜಿ ನಿರ್ದೇಶಕ ಕೇರಳ ಕೇಡರ್ ಡಿಜಿಪಿ ಅರುಣ್‍ಕುಮಾರ್ ಸಿನ್ಹಾ ಅವರು ನಿವೃತ್ತರಾಗುತ್ತಿದ್ದಾರೆ. ಅವರಿಗೆ ಇಂದು ವಿಶೇಷ ಬೀಳ್ಕೊಡುಗೆ ನೀಡಲಾಗುವುದು. ನಿನ್ನೆ 9 ಎಸ್ಪಿಗಳನ್ನು ಪೊಲೀಸ್ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries