HEALTH TIPS

32,000 ಕೋಟಿ ಸಾಲ; ಕೇರಳಕ್ಕೆ ಥಾಮಸ್ ಐಸಾಕ್ ನೀಡಿದ ಉಡುಗೊರೆ: ಅಡ್ವ. ಜಯಸೂರ್ಯನ್

                ತಿರುವನಂತಪುರ: ಕೇರಳದಲ್ಲಿ ಅಕ್ರಮ ಪಿಂಚಣಿ ವಿತರಣೆಯಿಂದ ಪ್ರಸ್ತುತ ಸಾಲ 32000 ಕೋಟಿಗೂ ಹೆಚ್ಚು ತಲಪಿದೆ. ಕೇರಳಕ್ಕೆ ಈ ಪರಿಸ್ಥಿತಿ ತಂದವರು ಥಾಮಸ್ ಐಸಾಕ್, ಈ ಸತ್ಯವನ್ನಾದರೂ ಕೇರಳ ಗುರುತಿಸಬೇಕು ಎಂದು ಕಿಸಾನ್ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವ. ಜಯಸೂರ್ಯನ್ ಹೇಳಿದ್ದಾರೆ.

            ಥಾಮಸ್ ಐಸಾಕ್ ಅವರು ನಕಲಿ ಅರ್ಥಶಾಸ್ತ್ರಜ್ಞರು. ಸತ್ಯವನ್ನು ಹೇಳುತ್ತಿಲ್ಲ ಎಂಬುದು ನಿಮಗೆ ಅರ್ಥವಾಗುತ್ತಿಲ್ಲವೇ? ಕಿಪ್ಭಿ ಮತ್ತು ರಹಸ್ಯವಾದ ಕೇರಳ ಸಾಮಾಜಿಕ ಭದ್ರತಾ ಪಿಂಚಣಿ ಲಿಮಿಟೆಡ್ (ಕೆ.ಎಸ್.ಎಸ್.ಪಿ.ಎಲ್) ಪಿಣರಾಯಿ ಅವರ ಹಣಕಾಸು ಸಚಿವರು ಬಜೆಟ್‍ನ ಹೊರಗೆ ಸಾಲ ಪಡೆಯಲು ಕಂಡುಕೊಂಡ ಎರಡು ಶಾರ್ಟ್‍ಕಟ್‍ಗಳಾಗಿವೆ. ಇಬ್ಬರಿಗೂ ಆದಾಯವಿಲ್ಲ, ಸಾಲ ಮಾಡಿ ಖರ್ಚು ಮಾಡುವುದು ಮಾತ್ರ. ಮೋಟಾರು ವಾಹನ ತೆರಿಗೆ ಮತ್ತು ಪೆಟ್ರೋಲಿಯಂ ಸೆಸ್‍ನಂತಹ ಕೆಲವು ಬಜೆಟ್ ಆದಾಯವನ್ನು ಕಿಫ್ಬಿಗೆ ಮೀಸಲಿಡಲಾಗಿದೆ. ಕೆಎಸ್‍ಎಸ್‍ಪಿಎಲ್‍ಗೆ ಯಾವುದೇ ಆದಾಯವಿಲ್ಲ. ಪ್ರಸ್ತುತ ಸಾಲ 32000 ಕೋಟಿಗೂ ಹೆಚ್ಚು. ಕಾನೂನು ಬಾಹಿರವಾಗಿ ಸಾಲ ಮಾಡಿ ಪಿಂಚಣಿ ನೀಡುತ್ತಿದ್ದಾರೆ. ಯಾರು ಮರುಪಾವತಿ ಮಾಡುತ್ತಾರೆ? ಯಾರ ಸುಳಿವೂ ಇಲ್ಲ. ಇದು ನಿಯಮಗಳು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಸಿ&ಎಜಿ ಈ ಹಿಂದೆಯೇ ಸೂಚಿಸಿತ್ತು.

           ರಾಜ್ಯ ಸರ್ಕಾರವು ಖಾತರಿಪಡಿಸುವ ಯಾವುದೇ ಸಾಲವನ್ನು ಸರ್ಕಾರದ ಒಟ್ಟು ಸಾಲದಲ್ಲಿ ಸೇರಿಸಲಾಗುತ್ತದೆ. ಅದು ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಅರ್ಥವಾಗುವ ವಿಷಯ. ಥಾಮಸ್ ಐಸಾಕ್ ಅವರಂತಹವರÁ್ರಗವೆಂದರೆ ಅವರು ಹೇಗಾದರೂ ಅತೀಂದ್ರಿಯರಾಗಿ ತೋರ್ಪಡಿಸುವುದು ಮಾತ್ರವಾಗಿದೆ.  ಅವರು ಸಿ&ಎಜಿ ವರದಿಯ ವಿರುದ್ಧ ಕೇರಳ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದರು. ಆದರೆ ಆರ್‍ಬಿಐ ಮತ್ತು ಕೇಂದ್ರ ಹಣಕಾಸು ಸಚಿವಾಲಯವು ಕಿಪ್ಭಿ ಮತ್ತು ಕೆಎಸ್‍ಎಸ್‍ಪಿಎಲ್‍ನ ಸಾಲದ ಮತ್ತಷ್ಟು ಪಾಲನ್ನು ಶಾಸನಬದ್ಧ ಸಾಲದ ಮಿತಿಯಿಂದ (ಜಿಎಸ್‍ಡಿಪಿಯ 3%) ರಾಜ್ಯಕ್ಕೆ ಮಂಜೂರು ಮಾಡಿದೆ. ಥಾಮಸ್ ಐಸಾಕ್ ಅವರು ಆರ್ಥಿಕ ನಿಯಮಗಳು ಮತ್ತು ನಿಬಂಧನೆಗಳನ್ನು ಬೈಪಾಸ್ ಮಾಡುವ ಮೂಲಕ ಅತಿಯಾದ ಬುದ್ದಿವಂತಿಕೆ ತೋರಿಸಿ ಕೇರಳಕ್ಕೆ ಅವಮಾನ ಮಾಡಿದ್ದಾರೆ. ಈ ಸತ್ಯವನ್ನಾದರೂ ಕೇರಳ ಗುರುತಿಸಬೇಕು ಎಂದು ಅಡ್ವ.ಜಯಸೂರ್ಯನ್ ಹೇಳಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries