HEALTH TIPS

ಚಿತ್ರರಂಗದಲ್ಲಿ ಡ್ರಗ್ ದಂಧೆ; ಮುಖ್ಯಮಂತ್ರಿ ಉತ್ತರಿಸಬೇಕು: ಸುರೇಶ್ ಗೋಪಿ: ಕಾಸರಗೋಡಲ್ಲೇ ಹೆಚ್ಚಿನ ಚಿತ್ರೀಕರಣಕ್ಕೆ ಕಾರಣವೂ ಬಹಿರಂಗ

                 ಎರ್ನಾಕುಳಂ: ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಸುರೇಶ್ ಗೋಪಿ ಹೇಳಿದ್ದಾರೆ.

               ಮಲಯಾಳಂ ಚಿತ್ರರಂಗದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಮಾದಕ ದ್ರವ್ಯ ಸೇವನೆ ಕುರಿತು ನಟ ಟೈನಿ ಟಾಮ್ ಬಹಿರಂಗ ಪಡಿಸಿರುವ ಬಗ್ಗೆ ಮುಖ್ಯಮಂತ್ರಿಗಳೇ ಪ್ರತಿಕ್ರಿಯಿಸಬೇಕು. ಎನ್‍ಸಿಬಿ ಮತ್ತು ಪೊಲೀಸರು ಡ್ರಗ್ಸ್ ದಂಧೆಯ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.

          ಈ ವಿಷಯವನ್ನು ಈ ಹಿಂದೆಯೂ ಚರ್ಚಿಸಲಾಗಿತ್ತು, ಆದರೆ ಶ್ರೀನಾಥ್ ಭಾಸಿ ಮತ್ತು ಶೇನ್ ನಿಗಮ್ ಅವರನ್ನು ಚಿತ್ರರಂಗದಿಂದ ನಿಷೇಧಿಸಿದಾಗ, ಅಮಲು ಸಂಬಂಧಿತ ಆರೋಪಗಳು ಮತ್ತು ಟೀಕೆಗಳು ಮತ್ತೆ ಎದ್ದವು. ಇದರ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಸೇವನೆ ವಿಚಾರವಾಗಿ ಟೈನಿ ಟಾಮ್ ಮುನ್ನೆಲೆಗೆ ಬಂದಿದ್ದರು. ಪ್ರಮುಖ ನಟರೊಬ್ಬರ ಮಗನಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಆದರೆ ನಶೆಯ ಭಯದಿಂದ ಅದನ್ನು ನಿರಾಕರಿಸಿದ್ದೇನೆ ಎಂದು ಟೈನಿ ಹೇಳಿದ್ದಾರೆ. ಟೈನಿ ಟಾಮ್ ಕೇರಳ ಪೊಲೀಸರ 'ಯೋದ್ದಾವ್' ಜಾಗೃತಿ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ. ಫಿಲಂ ಚೇಂಬರ್ ಕೂಡ ಸಿನಿಮಾ ಸೆಟ್ ಗಳಲ್ಲಿ ಡ್ರಗ್ಸ್ ಬಳಕೆ ಹೆಚ್ಚಿದ್ದು, ಇದನ್ನು ನಿಲ್ಲಿಸದಿದ್ದರೆ ಅಂತಹವರು ಕಾನೂನು ಪಾಲಕರ ಕೈಗೆ ಸಿಕ್ಕಿ ಬೀಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

           ಸಿನಿಮಾ ಸೆಟ್ ಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ನಿರ್ಮಾಪಕರ ಸಂಘ ಮೌನಮುರಿದಿದ್ದು, ಬಳಕೆದಾರರ ಪಟ್ಟಿಯನ್ನು ಹೊಂದಿದ್ದರೂ ಇನ್ನೂ ಬಿಡುಗಡೆ ಮಾಡಿಲ್ಲ. ದೂರು ಬಂದರೆ ತನಿಖೆ ನಡೆಸುತ್ತೇವೆ ಎಂಬುದು ಸರ್ಕಾರದ ನಿಲುವು. ಆದರೆ ನಿರ್ಮಾಪಕರು ದೂರು ನೀಡಲು ಸಿದ್ಧರಿಲ್ಲ. ಏಕೆಂದರೆ ಚಿತ್ರೀಕರಣಕ್ಕೆ ಅಡ್ಡಿಯಾಗಲಿದೆ. ಕಾಸರಗೋಡಿನಲ್ಲಿ ಡ್ರಗ್ಸ್ ನೀಡಲು ಅನುಕೂಲವಾಗಿರುವುದರಿಂದ ಈಗ ಹೆಚ್ಚಿನ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ ಎಂದು ನಿರ್ಮಾಪಕ ರಜಪೂತ್ ರಂಜಿತ್ ಹೇಳಿರುವುದು ವಿವಾದಕ್ಕೆ ಕಾರಣವಾಗಿತ್ತು. ಏನೇ ಆಗಲಿ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಬಗ್ಗೆ ಚರ್ಚೆ ಮುಂದುವರೆದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries