HEALTH TIPS

ಮಟನ್​ ಕರಿ ಕಡಿಮೆ ನೀಡಿದ್ದಕ್ಕೆ ಜೈಲರ್​ಗಳ ಮೇಲೆ ಹಲ್ಲೆ ನಡೆಸಿದ ಆರೋಪಿ!

            ತಿರುವನಂತಪುರಂಜೈಲಿನಲ್ಲಿ ತನಗೆ ಕಡಿಮೆ ಊಟ ಬಡಿಸುತ್ತಿದ್ದಾರೆ ಎಂದು ಆರೋಪಿಸಿ ಕೈದಿಯೋರ್ವ ಪೊಲೀಸ್​ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.

                 ಡ್ರಗ್ಸ್​ ಪ್ರಕರಣದಲ್ಲಿ ಶಿಕ್ಷೆ ಎದುರಿಸುತ್ತಿರುವ ವಯನಾಡ್ ಮೂಲದ ಫೈಜಾಸ್ ಎಂಬ ಕೈದಿಯನ್ನು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

                                    ಅಧಿಕಾರಿಗಳ ಮೇಲೆ ಹಲ್ಲೆ

            ಈ ಕುರಿತು ಪ್ರತಿಕ್ರಿಯಿಸಿರುವ ಜೈಲಿನ ಹಿರಿಯ ಅಧಿಕಾರಿ ಒಬ್ಬರು ಶನಿವಾರದ ಮೆನುವಿನ ಪ್ರಕಾರ ಕೈದಿಗಳಿಗೆ ಊಟಕ್ಕೆ ಮಟನ್​ ಕರಿಯನ್ನು ನೀಡಲಾಗಿತ್ತು. ಈ ವೇಳೆ ಫೈಜಾಸ್ ತನಗೆ ಕಡಿಮೆ ಆಹಾರ ಬಡಿಸಲಾಗಿದೆ ಎಂದು ಆರೋಪಿಸಿ ತಟ್ಟೆಯನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ.

                ಆಹಾರವನ್ನು ಎಸೆದಿದ್ದನ್ನು ಪ್ರಶ್ನಿಸಿದ ಅಧಿಕಾರಿಗಳ ಮೇಲೆ ಆರೋಪಿಯೂ ಏಕಾಏಕಿ ದಾಳಿ ಮಾಡಿದ್ದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಜೈಲಿನ ಅಧಿಕಾರಿಗಳ ದೂರಿನ ಮೇರೆಗೆ ಪೈಜಾಸ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೂಜಾಪುರ ಪೊಲೀಸರು ತಿಳಿಸಿದ್ದಾರೆ.

                  ಆರೋಪಿಯೂ ಈ ಹಿಂದೆ ತಾನಿದ್ದ ಜೈಲುಗಳಲ್ಲಿ ಅಧಿಕಾರಿಗಳ ಮೇಲೆ ಹಲವು ಭಾರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಪೈಜಾಸ್​ನನ್ನು ಪ್ರಸ್ತುತ ವಿಶೇಷ ಸೆಲ್​​ನಲ್ಲಿ ಇರಿಸಲಾಗಿದೆ ಎಂದು ಜೈಲಿನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries