HEALTH TIPS

ಕೇರಳದಾದ್ಯಂತ ಕ್ಯಾಮೆರಾಗಳನ್ನು ಅಳವಡಿಸಿದರೆ, ಸಾರ್ವಜನಿಕ ಅಭಿಪ್ರಾಯವು ಸರ್ಕಾರದ ಪರವಾಗಿರುತ್ತದೆ; ಪ್ರತಿಪಕ್ಷಗಳು ಭಯದಿಂದಲೇ ವಿರೋಧಿಸುತ್ತಿವೆ: ಇ.ಪಿ.ಜಯರಾಜನ್

           ತಿರುವನಂತಪುರ: ಕೇರಳದ ರಸ್ತೆಗಳಲ್ಲಿ ಎ.ಐ. ಕ್ಯಾಮೆರಾ ಅಳವಡಿಸಿದರೆ ರಾಜ್ಯದ ಜನತೆ ಸರ್ಕಾರದ ಪರವಾಗಿ ನಿಲ್ಲುತ್ತಾರೆ ಎಂದು ಎಡಪಕ್ಷಗಳ ಸಂಚಾಲಕ ಇ.ಪಿ.ಜಯರಾಜನ್ ತಿಳಿಸಿದ್ದಾರೆ. 

          ಜನರ ಭಾವನೆಗಳು ಎಡಪಕ್ಷಗಳ ಪರವಾಗಿ ಹೊಯ್ದಾಡುತ್ತವೆ ಎಂಬ ಭಯದಿಂದ ಪ್ರತಿಪಕ್ಷಗಳು ಕ್ಯಾಮೆರಾಗಳನ್ನು ವಿರೋಧಿಸುತ್ತಿವೆ ಎಂದು ಅವರು ಹೇಳಿದರು. ಇದರಿಂದ ಎಡಪಕ್ಷಗಳು ಹಿಂದೆ ಸರಿಯುವುದಿಲ್ಲ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು. ಪ್ರತಿಪಕ್ಷಗಳ ಕೂಗಿಗೆ, ಕುಗ್ಗುವ ಸರ್ಕಾರ ಇದಲ್ಲ. ರಸ್ತೆ ಕ್ಯಾಮೆರಾಗಳು ಮತ್ತು ಕೆ. ರೈಲು ದೊಡ್ಡ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ ಎಂದು ಹೇಳಿದರು. ಇಪಿ ಕೇರಳ ಎನ್‍ಜಿಒ ಯೂನಿಯನ್‍ನ ವಜ್ರಮಹೋತ್ಸವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 

       ಈ ಮಧ್ಯೆ, ಮೊನ್ನೆ ಬಿಡುಗಡೆಯಾದ ಸಿಲ್ವರ್ ಲೈನ್ ಅಧ್ಯಯನ ವರದಿಯಲ್ಲಿ ಕೆಆರ್‍ಆರ್ ಸಮಸ್ಯೆ ಕುರಿತು ಸರ್ಕಾರದ ವಾದಗಳನ್ನು ಶಾಸ್ತ್ರ ಸಾಹಿತ್ಯ ಪರಿಷತ್ತು ತಳ್ಳಿಹಾಕಿದೆ. ಸಿಲ್ವರ್ ಲೈನ್ ಯೋಜನೆಗೆ ಎಡಪಕ್ಷಗಳ ವಿರೋಧ ಸಿಪಿಎಂ ಮತ್ತು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದೇ ರೀತಿ, ಎಐ ಕ್ಯಾಮೆರಾಗಳಲ್ಲಿ ಭಾರಿ ಭ್ರμÁ್ಟಚಾರ ನಡೆದಿದೆ ಎಂದು ಪ್ರತಿಪಕ್ಷಗಳು ಮತ್ತು ಬಿಜೆಪಿ ಸಾಕ್ಷ್ಯದ ಬೆಂಬಲದೊಂದಿಗೆ ಹೇಳುತ್ತವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries