ರಾಯಪುರ್: ಛತ್ತೀಸ್ಗಢ ರಾಜ್ಯದ 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ರ್ಯಾಂಕ್ ಬಂದವರಿಗೆ (ಟಾಪರ್ಸ್) ಅಲ್ಲಿನ ಸರ್ಕಾರ ಪ್ರೋತ್ಸಾಹ ಕ್ರಮವಾಗಿ ಶನಿವಾರ ಹೆಲಿಕಾಪ್ಟರ್ ಪ್ರಯಾಣವನ್ನು ಆಯೋಜಿಸಿತ್ತು.
10, 12 ನೇ ತರಗತಿಯ ಟಾಪರ್ಸ್ಗೆ ಹೆಲಿಕಾಪ್ಟರ್ ಪಯಣ!
0
ಜೂನ್ 10, 2023
Tags
ರಾಯಪುರ್: ಛತ್ತೀಸ್ಗಢ ರಾಜ್ಯದ 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ರ್ಯಾಂಕ್ ಬಂದವರಿಗೆ (ಟಾಪರ್ಸ್) ಅಲ್ಲಿನ ಸರ್ಕಾರ ಪ್ರೋತ್ಸಾಹ ಕ್ರಮವಾಗಿ ಶನಿವಾರ ಹೆಲಿಕಾಪ್ಟರ್ ಪ್ರಯಾಣವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ 89 ವಿದ್ಯಾರ್ಥಿಗಳು ಭಾಗವಹಿಸಿ ಹೆಲಿಕಾಪ್ಟರ್ ಪಯಣದ ಆನಂದವನ್ನು ಅನುಭವಿಸಿದರು.
ವಾರ್ತಾ ಇಲಾಖೆಯಿಂದ ಈ ಕಾರ್ಯಕ್ರಮವನ್ನು ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಏಳು ಸೀಟ್ಗಳ ಹೆಲಿಕಾಪ್ಟರ್ನಲ್ಲಿ ವಿದ್ಯಾರ್ಥಿಗಳು ಕನಿಷ್ಠ ಅರ್ಧ ಗಂಟೆ ಪಯಣವನ್ನು ಸರದಿಯಾಗಿ ಮಾಡಿದರು. ಶಿಕ್ಷಣ ಸಚಿವ ಪ್ರೇಮಸಾಯಿ ಸಿಂಗ್ ಈ ವೇಳೆ ಹಾಜರಿದ್ದರು.
ಇದರಲ್ಲಿ 10 ವಿದ್ಯಾರ್ಥಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪ್ರಯುಕ್ತ 'ಆತ್ಮಾನಂದ ಮಾಧವಿ ಛತ್ರ ಪ್ರೋತ್ಸಾಹ' ಯೋಜನೆಯನ್ನು ಸಿಎಂ ಭೂಪೇಶ್ ಬಗೇಲಾ ಅವರು ಕಳೆದ ವರ್ಷ ಜಾರಿಗೆ ತಂದಿದ್ದರು. ಕಳೆದ ವರ್ಷ 125 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಪಯಣವನ್ನು ಆನಂದಿಸಿದ್ದರು. ಛತ್ತೀಸ್ಗಢ ರಾಜ್ಯ ಸರ್ಕಾರವೇ ಈ ಯೋಜನೆಗೆ ಹಣಕಾಸನ್ನು ಒದಗಿಸುತ್ತಿದೆ.