HEALTH TIPS

ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳಿಂದ ಪತ್ತೆಯಾದ ಉಲ್ಲಂಘನೆಗಳಿಗೆ ಇಂದಿನಿಂದ ದಂಡ ವಸೂಲಿ: 12 ವರ್ಷದೊಳಗಿನ ಮಕ್ಕಳಿಗೆ ತಾತ್ಕಾಲಿಕ ರಿಯಾಯಿತಿ

Top Post Ad

Click to join Samarasasudhi Official Whatsapp Group

Qries

              ತಿರುವನಂತಪುರಂ: ರಾಜ್ಯದ ವಿವಿಧೆಡೆ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಇಂದಿನಿಂದ (ಸೋಮವಾರ) ದಂಡ ವಿಧಿಸಲಾಗುವುದು.

            ದ್ವಿಚಕ್ರ ವಾಹನಗಳಲ್ಲಿ ಮೂರನೇ ಪ್ರಯಾಣಿಕರಾಗಿರುವ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದಂಡದಿಂದ ವಿನಾಯಿತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಪತ್ರಿಕಾಗೋಷ್ಠಿಯಲ್ಲಿ ನಿನ್ನಬೆ ಘೋಷಿಸಿದರು.

           ಮಕ್ಕಳ ವಿಚಾರದಲ್ಲಿ ಕೇಂದ್ರದಿಂದ ರಿಯಾಯಿತಿ ಕೇಳಲಾಗಿದೆ. ಅಂತಿಮ ನಿರ್ಧಾರ ಆಗುವವರೆಗೆ ದಂಡ ವಸೂಲಿ ಮಾಡದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ.


             ದ್ವಿಚಕ್ರ ವಾಹನದಲ್ಲಿ ಮೂರನೇ ವ್ಯಕ್ತಿಯಾಗಿ ಮಕ್ಕಳೊಂದಿಗೆ ಪ್ರಯಾಣಿಸುವ ಕುರಿತು ಪತ್ರ ಕಳುಹಿಸಿದ್ದರೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆ್ಯಂಟನಿ ರಾಜು ಹೇಳಿದರು.ನಿಯಮಗಳು ಮನುಷ್ಯರಿಗಾಗಿ. ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಇಂದು ಬೆಳಗ್ಗೆ 8 ಗಂಟೆಯಿಂದ ಉಲ್ಲಂಘನೆಗೆ ದಂಡ ವಿಧಿಸುವುದು ಜಾರಿಗೆ ಬಂದಿದೆ.  692 ಕ್ಯಾಮೆರಾಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ.ಇನ್ನೂ 34 ಕ್ಯಾಮೆರಾಗಳನ್ನು ಅಳವಡಿಸಬೇಕಾಗಿದೆ.

             ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳಲ್ಲಿ ಕೇರಳ ಐದನೇ ಸ್ಥಾನದಲ್ಲಿದೆ. ತಿರುವನಂತಪುರಂ ಎರ್ನಾಕು|ಳಂ ತ್ರಿಶೂರ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಾಜ್ಯದಲ್ಲಿ ಪ್ರತಿದಿನ 12 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries