HEALTH TIPS

ಮೊದಲ ದಿನವೇ ಶುರು: ಶಾಲಾ ಪ್ರವೇಶೋತ್ಸವ ಅಲಂಕಾರಿಕ ತೋರಣ ವಿಷಯದಲ್ಲಿ ಕೆಎಸ್‍ಯು ಮತ್ತು ಎಸ್‍ಎಫ್‍ಐ ಘರ್ಷಣೆ; ನಾಯಕರಿಗೆ ಗಾಯ

               ತಿರುವನಂತಪುರಂ: ಶಾಲಾ ಪ್ರವೇಶೋತ್ಸವದ ಸಿದ್ಧತೆ ವೇಳೆ ಕೆಎಸ್‍ಯು ಮತ್ತು ಎಸ್‍ಎಫ್‍ಐ ನಡುವೆ ಘರ್ಷಣೆ ನಡೆದಿದೆ.

            ತಿರುವನಂತಪುರಂನ ವೆಲ್ಲರಾದ ಶಾಲೆಯಲ್ಲಿ ಪ್ರವೇಶೋತ್ಸವದ ಅಲಂಕಾರದ ವೇಳೆ ಈ ಘಟನೆ ನಡೆದಿದೆ. ಮುಖಂಡರ ನಡುವೆ ವಾಗ್ವಾದ ನಡೆದು ಅದು ಘರ್ಷಣೆಗೆ ಕಾರಣವಾಯಿತು. 


            ಶಾಲಾ ಪ್ರವೇಶೋತ್ಸವ ಸಿದ್ಧತೆಗಾಗಿ ತೋರಣವನ್ನು ಅಲಂಕರಿಸಲು ನೀಡಿಲ್ಲ ಎಂಬ ವಾದ ವಾಗ್ಯುದ್ದಕ್ಕೆ  ಕಾರಣವಾಯಿತು. ಎರಡು ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಎಸ್‍ಎಫ್‍ಐ ವೆಲ್ಲರದ ಏರಿಯಾ ಅಧ್ಯಕ್ಷ ಮನ್ಸೂರ್ ಹಾಗೂ ಕಾರ್ಯಕರ್ತರಿಗೆ ಥಳಿಸಲಾಯಿತು. ಇದರೊಂದಿಗೆ ಎಸ್‍ಎಫ್‍ಐ ಕಾರ್ಯಕರ್ತರು ಕಾಂಗ್ರೆಸ್‍ನ ವೆಲ್ಲರ ಕ್ಷೇತ್ರ ಸಮಿತಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ದಾಳಿಯಲ್ಲಿ 9 ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries