HEALTH TIPS

ಡಾ.ವಂದನಾ ಮತ್ತು ಅಗ್ನಿಶಾಮಕ ದಳದ ಅಧಿಕಾರಿ ರಂಜಿತ್ ಅವರ ಕುಟುಂಬಗಳಿಗೆ ಸರ್ಕಾರ ಆರ್ಥಿಕ ನೆರವು ಘೋಷಣೆ

             ತಿರುವನಂತಪುರಂ: ಕರ್ತವ್ಯದ ವೇಳೆ ದುಷ್ಕರ್ಮಿಯಿಂದ ಇರಿತಕ್ಕೊಳಗಾಗಿ ಮೃತರಾದ  ಡಾ.ವಂದನಾ ಮತ್ತು ಔಷಧ ಘಟಕದ ಅಗ್ನಿ ಅವಘಡ ವೇಳೆ ದುರ್ಮರಣಕ್ಕೊಳಗಾದ ಅಗ್ನಿಶಾಮಕ ದಳದ ಅಧಿಕಾರಿ ರಂಜಿತ್ ಅವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ಘೋಷಿಸಿದೆ.

           ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಬ್ಬರ ಕುಟುಂಬಕ್ಕೂ ತಲಾ 25 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.

            ಮೇ 10 ರಂದು ಡಾ ವಂದನಾ ಕೊಲೆ ನಡೆದಿತ್ತು. ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆತಂದ ಶಾಲಾ ಶಿಕ್ಷಕ ವೆಲಿಯಮ್ ಚೆರುಕರಕೋಣಂ ಎಸ್ ಸಂದೀಪ್ ಅವರ ಚಾಕುವಿನಿಂದ ವಂದನಾ ಸಾವನ್ನಪ್ಪಿದ್ದಾರೆ. ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿದ್ದ ಡಾ. ವಂದನಾ ದಾಸ್ ಮೃತರಾದವರು.

          ತಿರುವನಂತಪುರದ ಕಿನ್‍ಫ್ರಾ ಇಂಡಸ್ಟ್ರಿಯಲ್ ಪಾರ್ಕ್‍ನಲ್ಲಿರುವ ಮೆಡಿಕಲ್ ಸರ್ವಿಸಸ್ ಕಾರ್ಪೋರೇಷನ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವ ಪ್ರಯತ್ನದಲ್ಲಿ ರಂಜಿತ್ ಸಾವನ್ನಪ್ಪಿದ್ದಾರೆ. ಬೆಂಕಿ ನಂದಿಸುವ ಯತ್ನದಲ್ಲಿ ಕಾಂಕ್ರೀಟ್ ಗೋಡೆ ಕುಸಿದು ಅಗ್ನಿಶಾಮಕ ದಳದ ಸಿಬ್ಬಂದಿ ರಂಜಿತ್ (32) ಮೃತಪಟ್ಟಿದ್ದಾರೆ. ಮೇ 23ರಂದು ರಂಜಿತ್ ಮೃತಪಟ್ಟಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries