ಕಾಸರಗೋಡು: ಕರ್ಕಾಟಕ ಹಬ್ಬದ ಪ್ರಯುಕ್ತ ಜುಲೈ 12 ರಿಂದ 15 ರವರೆಗೆ ಖಾದಿ ಬಟ್ಟೆಗಳ ಮೇಲೆ ಶೇ.30 ರಷ್ಟು ವಿಶೇಷ ರಿಯಾಯಿತಿ ದರದ ಮಾರಾಟ ವ್ಯವಸ್ಥೆ ಆಯೋಜಿಸಲಾಗಿದೆ. ಖಾದಿಬೋರ್ಡ್ ಶೋರೂಮ್ಗಳಿಂದ ಖಾದಿ ಉಡುಪುಗಳ ಖರೀದಿದಾರರು ಈ ಪ್ರಯೋಜನವನ್ನು ಪಡೆಯಬಹುದಾಗಿದೆ. ಸರ್ಕಾರಿ ಅರೆ ಸರ್ಕಾರಿ ನೌಕರರಿಗೆ ರೂ.1 ಲಕ್ಷದವರೆಗೆ ಸಾಲ ಸೌಲಭ್ಯವನ್ನೂ ಘೋಷಿಸಲಾಗಿದೆ. ಈ ಅವಕಾಶವನ್ನು ಗರಿಷ್ಠ ಸದುಪಯೋಗಪಡಿಸಿಕೊಂಡು ನಕಲಿ ಖಾದಿ ಹಾವಳಿಯನ್ನು ತಪ್ಪಿಸಬೇಕು ಎಂದು ಖಾದಿ ಬೋರ್ಡ್ ಅಧ್ಯಕ್ಷ ಪಿ.ಜಯರಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.