ಮುಳ್ಳೇರಿಯ: ಬೆಳ್ಳೂರು ಶ್ರೀಮಹಾವಿಷ್ಣು ದೇವಳದಲ್ಲಿ ಏಕಾಹ ಭಜನೆ ಹಾಗೂ ಭಕ್ತಿಗೀತೆ ಬಿಡುಗಡೆ ಸಮಾರಂಭ ಇಂದು ನಡೆಯಲಿದೆ.
ಬೆಳಿಗ್ಗೆ 10 ಕ್ಕೆ ನಡೆಯುವ ಸಮಾರಂಭದಲ್ಲಿ ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ.ಅಧ್ಯಕ್ಷತೆ ವಹಿಸುವರು. ಕರ್ನಾಟಕ ಇತಿಹಾಸ ಅಕಾಡೆಮಿ ಗಡಿನಾಡ ಘಟಕಾಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಹಾಡು ಬಿಡುಗಡೆಗೊಳಿಸುವರು. ಗ್ರಾ.ಪಂ.ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್, ಕ್ಷೇತ್ರದ ಅಧ್ಯಕ್ಷ ಎ.ಬಿ.ಗಂಗಾಧರ ಬಲ್ಲಾಳ್, ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಹರೀಶ್ ಗೋಸಾಡ, ಡಾ.ಮೋಹನ್ ದಾಸ್ ರೈ ಅತಿಥಿಗಳಾಗಿ ಉಪಸ್ಥಿತರಿರುವರು. ಸಾಹಿತಿ ಮಧುಸೂದನ ಬಲ್ಲಾಳ್ ಅಡ್ವಳ ಉಪಸ್ಥಿತರಿರುವರು. ಪತ್ರಕರ್ತ ವಿ.ಜಿ.ಕಾಸರಗೋಡು, ವಸಂತ ಬಾರಡ್ಕ ಮೊದಲಾದವರು ಉಪಸ್ಥಿತರಿರುವರು.