HEALTH TIPS

ಕೇಂದ್ರ ಯೋಜನೆಗಳ ಬುಡಮೇಲು ಕೇರಳ ಸರ್ಕಾರದ ಸಾಧನೆ:ಆದರ್ಶ್ ಬಿಎಂ

              ಉಪ್ಪಳ: ಕೇಂದ್ರ ಯೋಜನೆಗಳ ಬುಡಮೇಲು, ಕೇಂದ್ರ ಯೋಜನೆಗಳ ಹೆಸರು ಬದಲಾವಣೆ ,ಕೇರಳ ಸರ್ಕಾರದ ಸಾಧನೆ. ಬಡ ಜನತೆಗೆ ಸಿಗಬೇಕಾದ ಆಯುಸ್ಮನ್ ಆರೋಗ್ಯ ಜಾರಿಯಾಗುತಿಲ್ಲ, ಆವಾಜ್ ಯೋಜನೆ ಲೈಫ್ ಆದರೂ ಬಡವರಿಗೆ ಸರಿಯಾಗಿ ಲಭ್ಯವಾಗುತ್ತಿಲ್ಲ. 

                 ಜಲ್ ಜೀವನ್ ಯೋಜನೆ ಬುಡಮೇಲು ಗೊಳಿಸಲು ಎಲ್ಲ ಪ್ರಯತ್ನ ಸಿಪಿಎಂ  ಮಾಡುತ್ತಿದೆ, ಅನಗತ್ಯ ನಿಯಮಗಳನ್ನು, ಜಾರಿ ಮಾಡುತ್ತಿದೆ ,ಎಂದು ಬಿಜೆಪಿ ಮಂಜೇಶ್ವರ ಮಂಡಲ ಆಧ್ಯಕ್ಷ ಅದರ್ಶ ಬಿಎಂ ಆರೋಪಿಸಿದರು.

           ಪೈವಳಿಕೆ ಪಂಚಾಯತ್ ಆಡಳಿತ ಲೈಫ್ ಭವನ ಪದ್ದತಿ ಬುಡಮೇಲು ಗೊಳಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ನೇತೃತ್ವ ನೀಡಿದ ಸಾಯ0 ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.

           ಪುಷ್ಪಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ವಿಘ್ನೇಶ್ವರ ಮಾಸ್ಟರ್, ಎ ಕೆ ಕೈಯಾರ್, ಲೋಕೇಶ್ ನೋಂಡ,ಚಂದ್ರವತಿ ಸುಬ್ರಮಣ್ಯ ಭಟ್ ,ಕೆ. ವಿ ಭಟ್ ಮಾತನಾಡಿದರು. ಜಯಲಕ್ಷ್ಮಿ ಭಟ್ ಸ್ವಾಗತಿಸಿ, ಶ್ರೀಧರ ಬದಿಯಾರ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries