ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕಥೆ ಬರಹಗಾರ ಮತ್ತು ಕಾದಂಬರಿಕಾರ, ಬೇಪ್ಪೂರ್ ಸುಲ್ತಾನ್ ಎಂದೇ ಖ್ಯಾತರಾಗಿದ್ದ ವೈಕ್ಕಂ ಮುಹಮ್ಮದ್ ಬಶೀರ್ ಅವರ ಪುಣ್ಯತಿಥಿ ಆಚರಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಮರಿಯಂಗೋಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ದೀ ಸಂದರ್ಭ ನಾಲ್ಕನೇ ತರಗತಿಯ ಗ್ರಂಥಾಲಯವನ್ನು ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಉದ್ಘಾಟಿಸಿದರು. ಸೀನಿಯರ್ ಅಸಿಸ್ಟೆಂಟ್ ದಿವ್ಯಗಂಗಾ , ಸ್ಟಾಫ್ ಸೆಕ್ರಟರಿ ದಾಸಪ್ಪ ಮಾಸ್ಟರ್, ಹಿರಿಯ ಶಿಕ್ಷಕ ಸದಾಶಿವ ಶರ್ಮ, ಶಿಕ್ಷಕಿ ಶಾರದಾ, ನಜುಮುನ್ನೀಸಾ, ನೀತು ಮೊದಲಾದವರು ಉಪಸ್ಥಿತರಿದ್ದರು. ಸಾಹಿತಿ ಮುಹಮ್ಮದ್ ಬಶೀರ್ ಅವರ ಪುಸ್ತಕಗಳ ಪರಿಚಯ, ಕಥಾ ಪಾತ್ರಗಳ ಪರಿಚಯ ಮತ್ತಿತರ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ಶ್ರೀರೇಖಾ ಮತ್ತು ಅಶ್ವತಿ ನೇತೃತ್ವ ವಹಿಸಿದ್ದರು.