ಇಡುಕ್ಕಿ: ರಾಜ್ಯದಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಇಂದು ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಮಳೆ ಸುಧೀರ್ಘವಾಗಿ ಬೀಳದಿದ್ದರೂ ಬಿರುಸಿನ ಗಾಳಿ ಸಹಿತ ಮಳೆ ಸುರಿಯಲಿದೆ. ಇಂದು ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ ಉಂಟಾಗಲಿದೆ. ಇದರ ಭಾಗವಾಗಿ ಕೇರಳದಲ್ಲೂ ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ. ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಒಡಿಶಾದ ಕರಾವಳಿಯಲ್ಲಿ ವಾತಾವರಣದ ಟ್ರಫ್ ಅಸ್ತಿತ್ವದಲ್ಲಿದೆ.
ಕಡಿಮೆ ಒತ್ತಡದ ಜತೆಗೆ ಪಶ್ಚಿಮ ದಿಕ್ಕಿನ ಮಾರುತಗಳು ತೀವ್ರಗೊಂಡರೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಲಿದೆ. ಜುಲೈ ಮೊದಲ ವಾರದ ನಂತರ ದುರ್ಬಲ ಮಾನ್ಸೂನ್ 22 ಮತ್ತು 28 ರ ನಡುವೆ ಮತ್ತೆ ಬಲಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ಹಂಗಾಮಿನಲ್ಲಿ ಶೇ 38ರಷ್ಟು ಮಳೆ ಕೊರತೆಯಾಗಿದೆ.