HEALTH TIPS

ಕೊಲ್ಲೂರು ಅರಣ್ಯದಲ್ಲಿ ಪತ್ತೆಯಾಗಿದ್ದ ಕೇರಳದ ಯುವತಿ ಮಂಜೇಶ್ವರ ಸ್ನೇಹಾಲಯಕ್ಕೆ ರವಾನೆ

 


               ಕಾಸರಗೋಡು: ಕೊಲ್ಲೂರು ಅರಣ್ಯದಲ್ಲಿ ಅಲೆದಾಡುತ್ತಿದ್ದ ಸಂದರ್ಭ ಸ್ಥಳೀಯ ನಿವಸಿಗಳು ಹಾಗೂ ಪೊಲೀಸರು ಸೆರೆಹಿಡಿದಿದ್ದ ತಲಶ್ಯೇರಿ ಚಿರಕ್ಕರ ನಿವಾಸಿ 28ರ ಹರೆಯದ ಅರ್ಚನಾ ಎಂಬ ಯುವತಿಯನ್ನು ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸನೇಹಾಲಯಕ್ಕೆ ದಾಖಲಿಸಲಾಗಿದೆ.

            ಈಕೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸ್ನೇಹಾಲಯ ಅಧಿಕಾರಿಗಳು ತಲಶ್ಯೇರಿ ಠಾಣೆಯನ್ನು ಸಂಪರ್ಕಿಸಿದ್ದಾರೆ.  ಕೊಲ್ಲೂರು ಸನಿಹದ ಸಲಗೇರಿ ಅರಣ್ಯದಲ್ಲಿ ಸಉತ್ತಾಡುತ್ತಿರುವುದನ್ನು ಕಂಡ ಸಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಕೆ ಕೇರಳ ಮೂಲದವಳೆಂಬ ಸಂಶಯದ ಹಿನ್ನೆಲೆಯಲ್ಲಿ ಮಂಜೇಶ್ವರದ ಸ್ನೇಹಾಲಯಕ್ಕೆ ರವಾನಿಸಲಾಗಿದೆ. ಬಳಲಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈಕೆಯಿಂದ ಹೆಚ್ಚಿನ ಮಾಹಿತಿ ಸಂಗ್ರಹ ಸಾಧ್ಯವಾಗಿಲ್ಲ. ಒಂದೆರಡು ದಿವಸಗಳಲ್ಲಿ ಈಕೆಯ ಪೂರ್ಣ ಮಾಹಿತಿ ಲಭ್ಯವಾಘಲಿದೆ ಎಂದು ಸ್ನೇಹಾಲಯ ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries