ಕಾಸರಗೋಡು: ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘದ ನೂತನ ಕಟ್ಟಡ ನಿರ್ಮಾಣ ಸಮಿತಿ ರಚನಾ ಸಭೆ ಇತ್ತೀಚೆಗೆ ಮೀಪುಗುರಿಯ ಪಂಜುರ್ಲಿ ಕಲ್ಲುರ್ಟಿ ತರವಾಡು ಪರಿಸರದಲ್ಲಿ ಜರಗಿತು.
ಸಂಘದ ಅಧ್ಯಕ್ಷ ವಿಶ್ವನಾಥ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರವೀಣ್ ಕೊಡಿಯಾಲ್ಬೈಲ್ ಹಾಗು ಅವರ ಪತ್ನಿ ನಯನಾ ಪ್ರವೀಣ್ ಕೊಡಿಯಾಲ್ಬೈಲ್ ಮುಖ್ಯಅತಿಥಿಗಳಾಗಿ ಭಾಗವಹಿಸಿದರು. ಜಯಪ್ರಕಾಶ್ ಕುಂಬಳೆ, ಕಾರ್ಯದರ್ಶಿ ಪಾಂಡುರಂಗ ವಿದ್ಯಾನಗರ, ಕೋಶಾಧಿಕಾರಿ ದಿವಾಕರ ಮೀಪುಗುರಿ ಉಪಸ್ಥಿತರಿದ್ದರು.
ಈ ಸಂದರ್ಭ ಕಟ್ಟಡ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ರಕ್ಷಾಧಿಕರಿಯಾಗಿ ಪ್ರವೀಣ್ಕೊಡಿಯಾಲ್ಬೈಲ್, ಅಧ್ಯಕ್ಷರಾಗಿ ಜಯಪ್ರಕಾಶ್ಕುಂಬಳೆ, ಕಾರ್ಯದರ್ಶಿಯಾಗಿ ದಿವಾಕರ ಮೀಪುಗುರಿ, ಕೋಶಾಧಿಕಾರಿಯಾಗಿ ದಿನೇಶ್ ಚಂದ್ರಗಿರಿ ಅವರನ್ನು ಆಯ್ಕೆಮಾಡಲಾಯಿತು. ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿದರು. ಎಸ್ ಎನ್ ರಾವ್ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ವಿದ್ಯಾನಗರ ವಂದಿಸಿದರು.