ಕಾಸರಗೋಡು : ಕಾಞಂಗಾಡಿನ ಆರ್. ಜಯಕುಮಾರ್ ಪ್ರಶಸ್ತಿಗೆ ಯುಎಇ ಮನಿ ಎಕ್ಸ್ಚೇಂಜ್ನ ಮಾಜಿ ಸಿ.ಓ.ಓ ಸುಧೀರಕುಮಾರ ಶೆಟ್ಟಿ ಎಣ್ಮಕಜೆ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುಲ್ಲೂರು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ವಕೀಲ ಕೃಷ್ಣನ್ ನಾಯರ್ ಸ್ಮಾರಕ ಗ್ರಂಥಾಲಯ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಪ್ರವಾಸಿಯಾಗಿ, ದೇಶ, ವಿದೇಶದಲ್ಲಿ ಸಾರ್ವಜನಿಕ ರಂಗದಲ್ಲಿ ಮತ್ತು ಚಾರಿಟಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಆರ್. ಜಯಕುಮಾರ್ ಅವರ ಪತ್ನಿ ಬಿಂದು ಜಯಕುಮಾರ್ ಮತ್ತು ಅವರ ಕುಟುಂಬದ ಸಹಯೋಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ರೂ 25,000 ನಗದು, ಶಿಲ್ಪಿ ಕಾನಾಯಿ ಕುಞÂರಾಮನ್ ವಿನ್ಯಾಸಗೊಳಿಸಿದ ಶಿಲ್ಪ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸುಧೀರ್ ಕುಮಾರ್ ಶೆಟ್ಟಿ ಅವರು ವಲಸಿಗರ ಶ್ರೇಯೋಭಿವೃದ್ಧಿಗಾಗಿ ಸುದೀರ್ಘ ಕಾಲ ಶ್ರಮಿಸಿದ್ದು, 1991 ರಲ್ಲಿ, ಯುಎಇ ಮನಿ ಎಕ್ಸ್ಚೇಂಜ್ ವಹಿಸಿಕೊಂಡಾಗ, ಸಂಸ್ಥೆಯು ಎಂಟು ಶಾಖೆಗಳನ್ನು ಮತ್ತು ಸುಮಾರು 50 ಉದ್ಯೋಗಿಗಳನ್ನು ಹೊಂದಿತ್ತು, ಅದನ್ನು 950 ಶಾಖೆಗಳಾಗಿ ವಿಸ್ತರಿಸಿ, ಹಲವರಿಗೆ ಉದ್ಯೋಗ ಒದಗಿಸುವಲ್ಲಿ ಸುಧೀರ್ ಕುಮಾರ್ ಶೆಟ್ಟಿ ಶ್ರಮ ವಹಿಸಿದ್ದರು. ವಕೀಲ ಪಿ. ಕೃಷ್ಣನ್ ನಾಯರ್ ಅವರ ಐವತ್ತೊಂಬತ್ತನೇ ಪುಣ್ಯತಿಥಿಯ ಅಂಗವಾಗಿ ನಡೆಯಲಿರುವ ಪ್ರವಾಸೀ ಕುಟುಂಬ ಸಂಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸುದ್ದಿಗೋಷ್ಠಿಯಲ್ಲಿ ತೀರ್ಪುಗಾರರ ಸಮಿತಿ ಅಧ್ಯಕ್ಷ ಡಾ. ಸಿ. ಬಾಲನ್, ಪ್ರಧಾನ ಸಂಚಾಲಕ ಪದ್ಮನಾಭನ್, ವಕೀಲ ಪಿ.ನಾರಾಯಣನ್, ಅನಿಲ್ ಪುಲಿಕಲ್, ಕೆ. ವಿಜಯಕುಮಾರ್ ಉಪಸ್ಥಿತರಿದ್ದರು.