HEALTH TIPS

ಪ್ಲಸ್ ಟು ಸೀಟು ಬಿಕ್ಕಟ್ಟು: ಮುಖ್ಯಮಂತ್ರಿಗೆ ಪತ್ರ ಕಳುಹಿಸಿದ ಕಾಟ್ಜು: ಸಮಸ್ಯೆಯನ್ನು ಪರಿಹರಿಸಲಾಗದಿದ್ದರೆ ರಾಜೀನಾಮೆ ನೀಡಿ ಎಂಬ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ

                 ಮಲಬಾರ್‍ನಲ್ಲಿನ ಪ್ಲಸ್ ಒನ್ ಸೀಟು ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.

                 ಸೀಟು ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಪರಿಹಾರ ಸಿಗದಿದ್ದರೆ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪತ್ರಕ್ಕೆ ತಕ್ಷಣ ಉತ್ತರ ನೀಡದಿದ್ದಲ್ಲಿ ಭೀಕರ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಸರ್ಕಾರ ಎದುರಿಸಲಿದೆ ಎಂದು ಎಚ್ಚರಿಸಿದರು.

               ಈ ಅಪರಾಧಕ್ಕೆ ಮುಖ್ಯಮಂತ್ರಿ ಮತ್ತು ಸÀರ್ಕಾರವೇ ನೇರ ಹೊಣೆ. ಸರ್ಕಾರದ ಭಾಗವಾಗಿರುವ ಎಲ್ಲರೂ ಮಾತುಗಾರರೇ. ಆದರೆ ಕಡಿಮೆ ಕೆಲಸ ಮಾಡಲಾಗುತ್ತಿದೆ ಎಂಬುದು ನನಗೆ ಮನವರಿಕೆಯಾಗಿದೆ. ನಿನ್ನೆ ನಾನು ಮಲಪ್ಪುರಂಗೆ ಭೇಟಿ ನೀಡಿದಾಗ, 10 ನೇ ತರಗತಿಯಲ್ಲಿ 90 ಪರ್ಸೆಂಟ್ ಅಂಕಗಳನ್ನು ಪಡೆದ ಅನೇಕ ಮಕ್ಕಳು ಉನ್ನತ ಶಿಕ್ಷಣಕ್ಕೆ ಸೀಟು ಪಡೆಯದಿರುವುದು ನನಗೆ ಅರಿವಾಯಿತು. ಮಕ್ಕಳು ಬಹಳ ನಿರೀಕ್ಷೆಯಿಂದ ಕಲಿಯುತ್ತಾರೆ. ಭವಿಷ್ಯದಲ್ಲಿ ವೈದ್ಯರು, ಇಂಜಿನಿಯರ್ ಆಗಲು ಬಯಸುವ ಮಕ್ಕಳಿಗೆ ಸರ್ಕಾರ ಅಗತ್ಯ ಉನ್ನತ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು ಎಂದಿರುವರು.

              ಯುವಕರ ಜೀವನವನ್ನು ಹಾಳುಮಾಡುವುದು ದೊಡ್ಡ ಅಪರಾಧ ಎಂದು ನಾನು ಬಲವಾಗಿ ಪ್ರದಿಪಾದಿಸುವೆ. ಸರ್ಕಾರದ ವಿವಿಧ ವರ್ಗದ ಮುಖಂಡರು ಹಾಗೂ ಶಾಸಕರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೂ ಪರಿಹಾರವಾಗಿಲ್ಲ ಎಂದು ತಿಳಿದುಬಂದಿದೆ.  ಎಲ್ಲಾ ದೂರುಗಳು ಕಿವಿಗೆ ಬಿದ್ದವು. ನಾನು ಈ ವಿಚಾರವನ್ನು ಕೇರಳ ವಿಧಾನಸಭಾ ಸ್ಪೀಕರ್ ಶಂಸೀರ್ ಮತ್ತು ಮತ್ತೊಬ್ಬ ಮುಸ್ಲಿಂ ಲೀಗ್ ಶಾಸಕರ ಬಳಿ ಹೇಳಿದ್ದೇನೆ. ಮುಖ್ಯಮಂತ್ರಿ ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಅಥವಾ ಆ ಸ್ಥಾನ, ಕಛೇರಿಯನ್ನು ಬಿಟ್ಟುಬಿಡಲು ಸೂಚಿಸಿರುವೆ.  ಈ ಪತ್ರಕ್ಕೆ ತಕ್ಷಣ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಗಂಭೀರ ಪರಿಣಾಮ ಬೀರುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಕಾಡ್ಜು ಅವರ ಫೇಸ್ ಬುಕ್ ಪೋಸ್ಟ್ ನಲ್ಲಿ ಎಚ್ಚರಿಸಲಾಗಿದೆ.

                    ಸ್ಪೀಕರ್ ಎಎನ್ ಶಂಸೀರ್ ಹಾಜರಿದ್ದ ವೇದಿಕೆಯಲ್ಲಿ ಕಾಟ್ಜು ಅವರು ಪ್ಲಸ್ ಒನ್ ಸೀಟ್ ಬಿಕ್ಕಟ್ಟಿನ ಬಗ್ಗೆ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಸಮಸ್ಯೆ ಬಗೆಹರಿಸಲು ಸಾಧ್ಯವಾಗದವರು ರಾಜೀನಾಮೆ ನೀಡಿ ಮನೆಗೆ ಹೋಗಲಿ, ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಸರ್ಕಾರದ ವಿರುದ್ಧ ಪ್ರಚಾರ ಮಾಡುತ್ತೇವೆ ಎಂದು ಕಾಟ್ಜು ಬಹಿರಂಗವಾಗಿ ಹೇಳಿದರು. 10ನೇ ತರಗತಿ ಉತ್ತೀರ್ಣರಾದವರ ಸಂಖ್ಯೆಗೂ ಪ್ಲಸ್ ಒನ್ ಸೀಟುಗಳ ಸಂಖ್ಯೆಗೂ ಭಾರಿ ಅಂತರವಿದೆ. ಮಕ್ಕಳು ಬಹಳ ನಿರೀಕ್ಷೆಯಿಂದ ಕಲಿಯುತ್ತಾರೆ. ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರು ಈ ಬಗ್ಗೆ ಯೋಚಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಇಂತಹ ಅಲಕ್ಷ್ಯ ಮಕ್ಕಳ ಮೇಲಿನ ಅಪರಾಧ ಎಂದೂ ಕಾಟ್ಜು ಹೇಳಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries