HEALTH TIPS

ಪಡಿತರ ಅಂಗಡಿಗಳ ಅಕ್ಕಿ ವಿತರಣೆ ಬಗ್ಗೆ ವ್ಯಾಪಕ ದೂರು

                  ತಿರುವನಂತಪುರಂ: ಓಣಂ ಹಬ್ಬದ ಭಾಗವಾಗಿ ದಕ್ಷಿಣದ ಜಿಲ್ಲೆಗಳಲ್ಲಿ ಚಂಬಾವರಿ (ಮಟ್ಟ) ಮತ್ತು ಉತ್ತರದ ಜಿಲ್ಲೆಗಳಲ್ಲಿ ಕುಠಾರಿ (ಬಿಳ್ತಿಗೆ ಅಕ್ಕಿ) ನೀಡುವುದರ ವಿರುದ್ಧ ವ್ಯಾಪಕ ದೂರುಗಳಿವೆ.

                 ಕುಸುಲಕ್ಕಿ ಅಗತ್ಯವಿಲ್ಲದವರಿಗೂ ಬಲವಂತವಾಗಿ ವಿತರಿಸಲಾಗುತ್ತಿದೆ. ದಕ್ಷಿಣ ಜಿಲ್ಲೆಗಳಲ್ಲಿ ಚಂಬಾವರಿ ಹಾಗೂ ಮಲಬಾರಿನ ಕುಸುಲಕ್ಕಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದು ಸಾರ್ವಜನಿಕ ವಿತರಣಾ ಇಲಾಖೆಯ ಸಮರ್ಥನೆ. ಅದಕ್ಕಾಗಿಯೇ ದಕ್ಷಿಣ ಪ್ರದೇಶಗಳಲ್ಲಿ ಕುಸುಲಕ್ಕಿ ಮತ್ತು ಉತ್ತರ ಪ್ರದೇಶಗಳಲ್ಲಿ ಮಾತ್ರ ಬಿಳ್ತಿಗೆ ಅಕ್ಕಿ ವಿತರಿಸಲಾಗುತ್ತಿದೆ. ಆದರೆ ಎರಡೆರಡು ಅಕ್ಕಿಯನ್ನು ಎರಡೂ ಕಡೆ ಬಳಸುವವರಿದ್ದಾರೆ.

              ದಕ್ಷಿಣ ಪ್ರದೇಶಗಳಲ್ಲಿ ಕುಸುಲಕ್ಕಿ ಬಳಸುವವರಿಗೆ ಚಂಬಾವರಿ ಮಾತ್ರ ಸಿಗುತ್ತದೆ. ಉತ್ತರ ಪ್ರದೇಶಗಳಲ್ಲಿ ಚಂಬಾವರಿ ಬಳಸುವವರಿಗೆ ಬಿಳ್ತಿಗೆ ಮಾತ್ರ ಸಿಗುತ್ತದೆ. ಇದರಿಂದ ಕಾರ್ಡ್ ದಾರರು ಅಕ್ಕಿ ಖರೀದಿಸದೆ ವಾಪಸಾಗುತ್ತಿದ್ದಾರೆ.

               ಈಗಿರುವ ಎರಡು ಕಿಲೋ ಜತೆಗೆ ಬಿಳಿ ಕಾರ್ಡ್ ದಾರರಿಗೆ ಐದು ಕಿಲೋ ಅಕ್ಕಿ ಹಾಗೂ ನೀಲಿ ಕಾರ್ಡ್ ದಾರರಿಗೆ ತಲಾ 2 ಕಿಲೋ ಅಕ್ಕಿ ಜೊತೆಗೆ 10.90 ಪೈಸೆ ದರದಲ್ಲಿ ಐದು ಕಿಲೋ ಅಕ್ಕಿ ಸಿಗಲಿದೆ ಎಂದು ಆಹಾರ ಸಚಿವರು ಹೇಳಿದ್ದರು(ಕಾರ್ಡ್ ಕಿಲೋಗೆ ರೂ.4 ದರದಲ್ಲಿ). ಎಫ್‍ಸಿಐ ಸಾಕಷ್ಟು ಪ್ರಮಾಣದ ಅಕ್ಕಿ ದಾಸ್ತಾನು ಹೊಂದಿದೆ.  ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳ ಅಕ್ಕಿ ಸಂಗ್ರಹಿಸಲು ಆರಂಭಿಸಲಾಗಿದೆ. ಇನ್ನೂ ಕಾರ್ಡ್ ದಾರರಿಗೆ ಬೇಕಾದ ಅಕ್ಕಿ ನೀಡಲು ಸಿದ್ಧವಾಗಿಲ್ಲ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries