HEALTH TIPS

12 ಯುವ ವಿಜ್ಞಾನಿಗಳಿಗೆ 'ಶಾಂತಿ ಸ್ವರೂಪ್‌ ಭಟ್ನಾಗರ್ ಪ್ರಶಸ್ತಿ' ಗೌರವ

                ವದೆಹಲಿ : ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್‌ಐಆರ್‌) 2022ನೇ ಸಾಲಿನ 'ಶಾಂತಿ ಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ'ಯನ್ನು ಸೋಮವಾರ ಪ್ರಕಟಿಸಿದೆ. 12 ಮಂದಿ ಯುವ ವಿಜ್ಞಾನಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹ 5 ಲಕ್ಷ ನಗದು, ಫಲಕ ಒಳಗೊಂಡಿದೆ.

              45 ವರ್ಷ ಮೀರದ ಸಾಧಕ ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿಗಳನ್ನು ಕೈಬಿಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ವಿವಾದ ಇರುವಂತೆಯೇ ಈ ಪ್ರಶಸ್ತಿ ಘೋಷಣೆಯಾಗಿದೆ.

                 ಸಿಎಸ್‌ಐಆರ್‌ನ ಪ್ರಥಮ ಪ್ರಧಾನ ನಿರ್ದೇಶಕರ ಹೆಸರಿನಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್‌ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಾಮಾನ್ಯವಾಗಿ ಸಂಸ್ಥೆಯ ಸ್ಥಾಪನಾ ದಿನ ಸೆ.26ರಂದು ಪ್ರಶಸ್ತಿ        ವಿವರಗಳನ್ನು ಪ್ರಕಟಿಸಲಾಗುತ್ತಿತ್ತು. ಪುರಸ್ಕೃತರ ವಿವರ:

* ಕೋಲ್ಕತ್ತದ ರಾಸಾಯನಿಕ ಜೀವವಿಜ್ಞಾನ ಸಂಸ್ಥೆಯ ಪ್ರತಿರಕ್ಷಾ ಶಾಸ್ತ್ರಜ್ಞ ದಿಪ್ಯಮನ್‌ ಗಂಗೂಲಿ.

* ಪುಣೆ ಮೂಲದ ಅಂತರ ವಿಶ್ವವಿದ್ಯಾಲಯ ಖಭೌತ ವಿಜ್ಞಾನ ಕೇಂದ್ರದ ಕನಕ್‌ ಸಹಾ.

* ಬೆಂಗಳೂರು ಮೂಲದ ಜವಾಹರ್‌ಲಾಲ್‌ ನೆಹರೂ ಅಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಕನಿಷ್ಕಾ ಬಿಸ್ವಾಸ್.

* ಭಾರತೀಯ ವಿಜ್ಞಾನ ಸಂಸ್ಥೆಯ ಸೂಕ್ಷ್ಮಜೀವವಿಜ್ಞಾನ, ಕಣ ಜೀವವಿಜ್ಞಾನ ಇಲಾಖೆಯ ಅಮಿತ್‌ ಸಿಂಗ್.

* ಐಐಟಿ-ಕಾನ್ಪುರದ ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್‌ ವಿಭಾಗದ ಅರುಣ್‌ ಕುಮಾರ್ ಶುಕ್ಲಾ.

* ಜವಹರ್‌ಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಜೈವಿಕ ಸಾವಯವ ರಾಸಾಯನಿಕ ಪ್ರಯೋಗಾಲಯದ ಟಿ.ಗೋವಿಂದರಾಜ್‌.

* ಜೋರ‍್ಹಟ್‌ನ ಸಿಎಸ್‌ಐಆರ್‌ ಈಶಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕಲ್ಲಿದ್ದಲು ಮತ್ತು ಇಂಧನ ಸಂಶೋಧನಾ ಸಮೂಹದ ಬಿನಯ್‌ ಕುಮಾರ್ ಸೈಕಿಯಾ.

* ಐಐಟಿ ಖರಗ್‌ಪುರ್‌ನ ಕಂಪ್ಯೂಟರ್‌ ಸೈನ್ಸ್ ಮತ್ತು ಎಂಜಿನಿಯರಿಂಗ್‌ ವಿಭಾಗದ ದೇಬದೀಪ್‌ ಮುಖ್ಯೋಪಾಧ್ಯಾಯ್.

* ಮುಂಬೈ ಮೂಲದ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಅನಿಶ್‌ ಘೋಷ್‌।

* ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ ಸಾಕೇತ್‌ ಸೌರಭ್.

* ಐಐಟಿ ಬಾಂಬೆಯ ಅಚ್ಯುತ ಮೆನನ್‌ ಆರೋಗ್ಯ ವಿಜ್ಞಾನ ಅಧ್ಯಯನ ಸಂಸ್ಥೆಯ ಡಾ.ಜೀಮನ್‌ ಪನ್ನಿಯಮ್ಮಕಾಲ್.

* ಐಐಟಿ ಬಾಂಬೆಯ ಜೀವವಿಜ್ಞಾನ ಮತ್ತು ಜೀವ ಎಂಜಿನಿಯರಿಂಗ್‌ ವಿಭಾಗದ ರೋಹಿತ್‌ ಶ್ರೀವಾತ್ಸವ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries