HEALTH TIPS

ಮಣಿಪುರ ಈಗ ಶಾಂತವಾಗಿದೆ: ವಿಶ್ವಸಂಸ್ಥೆಯ ಪರಿಣತರ ಹೇಳಿಕೆಗೆ ಭಾರತ ಪ್ರತಿಕ್ರಿಯೆ

Top Post Ad

Click to join Samarasasudhi Official Whatsapp Group

Qries

             ವಿಶ್ವಸಂಸ್ಥೆ: ಮಣಿಪುರ ಬೆಳವಣಿಗೆ ಕುರಿತು ವಿಶ್ವಸಂಸ್ಥೆಯ ಪರಿಣತರ ಹೇಳಿಕೆಗಳನ್ನು ಭಾರತವು ತಿರಸ್ಕರಿಸಿದೆ. 'ಇದು, ಅನಪೇಕ್ಷಿತ ಹಾಗೂ ದಾರಿತಪ್ಪಿಸುವ ಹೇಳಿಕೆ. ಈಶಾನ್ಯ ರಾಜ್ಯ ಸದ್ಯ ಶಾಂತಿಯುತವಾಗಿದೆ' ಎಂದು ಪ್ರತಿಪಾದಿಸಿದೆ.

              ಮಾನವ ಹಕ್ಕು ಕುರಿತ ಹೈಕಮಿಷನರ್‌ ಕಚೇರಿಯ ವಿಶೇಷ ಪ್ರಕ್ರಿಯಾ ಶಾಖೆಗೆ ಸೋಮವಾರ ಭಾರತೀಯ ಹೈಕಮಿಷನ್‌ ಈ ಕುರಿತು ಮೌಖಿಕವಾಗಿ ಪ್ರತಿಕ್ರಿಯೆ ನೀಡಿದೆ.

              'ಮಣಿಪುರದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಶಾಂತಿಯುತವಾಗಿದೆ. ಭಾರತ ಸರ್ಕಾರವು ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮಕೈಗೊಂಡಿದೆ' ಎಂದು ಹೇಳಿದೆ.

           'ನಮ್ಮ ಸರ್ಕಾರವು ಮಣಿಪುರವು ಒಳಗೊಂಡಂತೆ ದೇಶದ ಜನರ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ಈ ಸಂಬಂಧ ವಿಶ್ವಸಂಸ್ಥೆಯ ಪರಿಣತರು ನೀಡಲಾದ ಹೇಳಿಕೆಯನ್ನು ಅನಪೇಕ್ಷಿತ ಎಂದು ಭಾರತದ ಶಾಶ್ವತ ಮಿಷನ್‌ ತಿರಸ್ಕರಿಸುತ್ತದೆ' ಎಂದು ಕಟುವಾಗಿ ಪ್ರತಿಕ್ರಿಯಿಸಿದೆ.

               'ಮಣಿಪುರದಲ್ಲಿ ಲೈಂಗಿಕ ಹಿಂಸಾಚಾರ, ನಿರಂತರ ದೌರ್ಜನ್ಯ, ಮನೆಗಳ ನಾಶ, ಬಲವಂತದ ತೆರವು ಕಾರ್ಯಾಚರಣೆ ಸೇರಿದಂತೆ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ' ಎಂಬ ವರದಿಗಳ ಕುರಿತು ವಿಶ್ವಸಂಸ್ಥೆ ಪರಿಣತರ ಸಮೂಹ ಆತಂಕ ವ್ಯಕ್ತಪಡಿಸಿದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries