HEALTH TIPS

ಜನಬದಲಿ ಪ್ರಕರಣ: ಭಾರತಿಯಮ್ಮಗೆ ಬೆದರಿಕೆ: ಪೋಲೀಸರಿಂದಲೇ ಪ್ರಕರಣವನ್ನು ಹಿಂಪಡೆಯಲು ಒತ್ತಡ

                 ಪಾಲಕ್ಕಾಡ್: ಜನ ಬದಲಿ ಬಂಧನಕ್ಕೊಳಗಾಗಿದ್ದ ಭಾರತಿಯಮ್ಮಗೆ ಪೋಲೀಸರೇ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಪೋಲೀಸ್ ಅಧಿಕಾರಿಗಳು ಮನೆಗೆ ಬಂದು ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಭಾರತೀಯಮ್ಮ ಅವರ ಸಹೋದರ ಹೇಳಿದ್ದಾರೆ.

             ವಿನಾಕಾರಣ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೋಲೀಸರ ವಿರುದ್ಧ ಈ ಕುರಿತು ಕ್ರಮ ಕೈಗೊಳ್ಳುವಂತೆ ಭಾರತೀಯಮ್ಮ ಮುಖ್ಯಮಂತ್ರಿ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಘಟನೆ 1998ರಲ್ಲಿ ನಡೆದಿತ್ತು. ಕಳೆದ ತಿಂಗಳು ಪ್ರಕರಣದಲ್ಲಿ ಭಾರತಿಯಮ್ಮ ಅವರನ್ನು ತಪ್ಪಿನ ಅರಿವಾಗಿ ಖುಲಾಸೆಗೊಳಿಸಲಾಗಿತ್ತು.

               ಪಾಲಕ್ಕಾಡ್‍ನ ವೆನ್ನಕ್ಕರ ನಿವಾಸಿ ರಾಜಗೋಪಾಲ್ ಎಂವರ ಮನೆಗೆಲಸದಳಾದ ಭಾರತಿಯಮ್ಮ ಎಂಬಾಕೆ  ಕೋಪಗೊಂಡು ಮನೆಯ ಗಿಡದ ಕುಂಡ ಹಾಗೂ ಕಿಟಕಿಯ ಗಾಜನ್ನು ಒಡೆದಿದ್ದರು. ಕುಟುಂಬದ ಸದಸ್ಯರನ್ನೂ ನಿಂದಿಸಿದ್ದರು. ನಂತರ ಮನೆಯ ಮಾಲೀಕ ರಾಜಗೋಪಾಲ್ ಪಾಲಕ್ಕಾಡ್ ಸೌತ್ ಪೋಲೀಸರಿಗೆ ದೂರು ನೀಡಿದ್ದರು. ಅವರ ಮನೆಯಲ್ಲಿದ್ದ ಕೆಲಸದಾಕೆಯ ಹೆಸರು ಭಾರತಿಯಮ್ಮ ಎಂದಾಗಿತ್ತು. ಕೊಟ್ಟಿರುವ ವಿಳಾಸವೂ ನಿಜವಾದ ಭಾರತೀಯಮ್ಮನದು.

           ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಭಾರತಿಯಮ್ಮ ನಂತರ ಪರಾರಿಯಾಗಿದ್ದು, ಈ ಕಾರಣಕ್ಕಾಗಿಯೇ ಪೋಲೀಸರು ಭಾರತಿಯಮ್ಮ ಎಂಬ ಮತ್ತೊಬ್ಬರನ್ನು ಬಂಧಿಸಿದ್ದರು. ಭಾರತಿಯಮ್ಮ ತಾನು ಮಾಡದ ಅಪರಾಧಕ್ಕಾಗಿ ಮರುದಿನ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ನಾಲ್ಕು ವರ್ಷದಲ್ಲಿ ಮೂರ್ನಾಲ್ಕು ಬಾರಿ ನ್ಯಾಯಾಲಯಕ್ಕೆ ತೆರಳಬೇಕಾಯಿತು ಎನ್ನುತ್ತಾರೆ ಭಾರತಿಯಮ್ಮ. ಆರೋಪಿಯ ಹೆಸರು ಭಾರತಿಯಮ್ಮ ಮತ್ತು ವಿಳಾಸ ಒಂದೇ ಎಂದು ಪಾಲಕ್ಕಾಡ್ ಸೌತ್ ಪೋಲೀಸರು ತಿಳಿಸಿದ್ದಾರೆ.

          ಆದರೆ ದೂರುದಾರರು ನೇರವಾಗಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿ ಭಾರತಿಯಮ್ಮ ನಿಜವಾದ ಆರೋಪಿಯಲ್ಲ ಎಂದು ಹೇಳಿಕೆ ನೀಡಿ ಬಳಿಕ ಮುಕ್ತರಾದರು. ಬಳಿಕ ದೂರುದಾರರು ಪ್ರಕರಣವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries