ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಸನಿಹದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಭವನಕ್ಕೆ ಕಟೀಲು ಆರು ಮೇಳಗಳ ಯಜಮಾನ ದೇವಿ ಪರಸಾದ್ ಶೆಟ್ಟಿ ಕಲ್ಲಾಡಿ ಹಾಗೂ ಪಂಚ ಮೇಳಗಳ ಸರದಾರ ಕಿಶನ್ ಹೆಗ್ಡೆ ಬೈಲೂರು ಅವರು ಮಂಗಳವಾರ ಭೇಟಿ ನೀಡಿ ಭವನದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಸಂಚಾಲಕ ಸಿರಿಬಾಗಿಲು ರಾಮಕೃಷ್ಣ ಮಯ್ಯ ಬರಮಾಡಿಕೊಮಡರು.