HEALTH TIPS

ಕದ್ರಿ ಮಂಜುನಾಥನ ದೇವಾಲಯವೇ ಉಗ್ರ ಅರಾಫತ್​ ಅಲಿಯ ಟಾರ್ಗೆಟ್​; NIA ತನಿಖೆ ವೇಳೆ ಹೊರಬಂತು ಸ್ಪೋಟಕ ಸತ್ಯ

            ವದೆಹಲಿ: ಶಿವಮೊಗ್ಗದ ಟ್ರಯಲ್​ ಬ್ಲ್ಯಾಸ್ಟ್​, ಮಂಗಳೂರು ಕುಕ್ಕರ್​ ಬಾಂಬ್​ ಸ್ಪೋಟ, ಗೋಡೆ ಬರಹದ ಮೂಲ ಆರೋಪಿ ಶಿವಮೊಗ್ಗದ ಅರಾಫತ್​ ಅಲಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಗುರುವಾರ ಬಂಧಿಸಿದ ಬೆನ್ನಲ್ಲೇ ಸಂಚೊಂದು ಬಹಿರಂಗಗೊಂಡಿದೆ.


                ಬಂಧಿತ ಆರೋಪಿಗಳು ಮಂಗಳೂರಿನಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳವಾದ ಕದ್ರಿ ಮಂಜುನಾಥನ ದೇವಾಲಯವನ್ನು ಗುರಿಯಾಗಿಸಿದ್ದರೆಂಬ ವಿಚಾರ ತನಿಖೆ ವೇಳೆ ಹೊರಬಿದ್ದಿದೆ.

               ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಅರಾಫತ್​ ಅಲಿ ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ. ಶಿವಮೊಗ್ಗದ ಟ್ರಯಲ್​ ಬ್ಲ್ಯಾಸ್ಟ್​, ಮಂಗಳೂರಿನ ಕುಕ್ಕರ್​ ಸ್ಪೋಟ, ಗೋಡೆ ಬರಹದ ಮೂಲ ರೂವಾರಿಯಾಗಿದ್ದ. ಅರಾಫತ್​ ಅಲಿ ಪ್ರಚೋದನೆಗೆ ಒಳಗಾಗಿದ್ದ ಶಾರಿಕ್​ ಕುಕ್ಕರ್​ ಬಾಂಬ್​ ಸ್ಪೋಟಿಸಲು ಸಿದ್ದತೆ ನಡೆಸಿದ್ದ.

                     ಕುಕ್ಕರ್​​ ಬಾಂಬ್​ ಸ್ಪೋಟಕ್ಕೂ ಮೊದಲು ಮಂಗಳೂರಿನಲ್ಲಿ ಉಗ್ರಕೃತ್ಯಕ್ಕೆ ಸಂಬಂಧಿಸಿದ ಗೋಡೆ ಬರಹ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಮಾಝ್​ ಮುನೀರ್​ ಹಾಗೂ ಯಾಸೀನ್​ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಇವರಿಗೂ ಅರಾಫತ್​ ಪ್ರಚೋಧನೆ ನೀಡಿದ್ದ ಎಂದು ತಿಳಿದು ಬಂದಿದೆ. ನಂತರ ಶಿವಮೊಗ್ಗದಲ್ಲಿ ಸ್ಪೋಟಿಸುವ ಪ್ರಯೋಗ ನಡೆದಿತ್ತು. ಅಂತಿಮವಾಗಿ ಶಾರಿಕ್​ ಕುಕ್ಕರ್ ಬಾಂಬ್​ ಸ್ಪೋಟಿಸಲು ಸಂಚು ರೂಪಿಸಿದ್ದ ಎಂದು ಎನ್​ಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries