HEALTH TIPS

ಕೇರಳ ಮರಾಟಿ ಶಾರದೋತ್ಸವ ಸಮಿತಿಯ ವತಿಯಿಂದ ಅ.23, 24ರಂದು : ಬದಿಯಡ್ಕದಲ್ಲಿ 16ನೇ ವರ್ಷದ ಶಾರದೋತ್ಸವ

                ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ ಕಾಸರಗೋಡು ಇದರ 16ನೇ ವರ್ಷದ ಶಾರದೋತ್ಸವವು ಬದಿಯಡ್ಕ ಶ್ರೀ ಗುರುಸದನದಲ್ಲಿ ಅ.23, 24ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಅ.23ರಂದು ಸೋಮವಾರ ಬೆಳಗ್ಗೆ 6.30ಕ್ಕೆ ಶ್ರೀಶಾರದಾ ವಿಗ್ರಹ ಪ್ರತಿಷ್ಠೆ, ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಬೆಳಗಿನ ಪೂಜೆ, ಶ್ರೀ ಮಹಾಗಣಪತಿ ಹೋಮ, 8 ಗಂಟೆಯಿಂದ ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ, 9 ಗಂಟೆಗೆ ವಸಂತ ನಾಯ್ಕ ಪೆರುಮುಂಡ ಅವರಿಂದ ಧ್ವಜಾರೋಹಣ, ಆಯುಧಪೂಜೆ, 10.30ಕ್ಕೆ ದಿ. ಆರ್.ಚಕ್ರೇಶ್ವರ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಗಡಿನಾಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಸರಗೋಡು ಸಿಪಿಸಿಆರ್‍ಐಯ ನಾರಾಯಣ ನಾಯ್ಕ ಪಳ್ಳಕಾನ ಭಾಗವಹಿಸುವರು.  ಶಾರದೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ ಹಾಗೂ ಶ್ರೀ ಮಹಮ್ಮಾಯಿ ಅಮ್ಮನವರ ದೇವಿಪಾತ್ರಿ ಐತ್ತಪ್ಪ ನಾಯ್ಕ ಬಜಕೂಡ್ಲು ಅವರಿಗೆ ಸನ್ಮಾನ, ಯುವಕೃಷಿಕ ವಸಂತ ಕುಂಟಾಲುಮೂಲೆ ಅವರಿಗೆ ಅಭಿನಂದನೆ ನಡೆಯಲಿದೆ. ಡಾ. ಕೇಶವ ಖಂಡಿಗೆ, ಡಾ| ಶಿವ ನಾಯ್ಕ ಶುಭಾಶಂಸನೆಗೈಯ್ಯುವರು. ಮಧ್ಯಾಹ್ನ ಕಲಾಸಾಂಸ್ಕøತಿಕ ಕಾರ್ಯಕ್ರಮಗಳಾದ ಭಕ್ತಿಗೀತೆ, ಭರತನಾಟ್ಯ, ಸಮೂಹ ನೃತ್ಯ, ಮರಾಟಿ ಭಾಷೆಯಲ್ಲಿ ಭಾಷಣ, ಮಿಮಿಕ್ರಿ ಪ್ರದರ್ಶನಗೊಳ್ಳಲಿದೆ. ಸಂಜೆ 5 ಗಂಟೆಯಿಂದ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕøತ ಜಯರಾಮ ಪಾಟಾಳಿ ಪಡುಮಲೆ ಇವರು ರಚಿಸಿ ನಿರ್ದೇಶಿಸಿದ ಕನ್ನಡ, ತುಳು, ಮಲೆಯಾಳಂ, ಮರಾಟಿ ಭಾಷೆ ಮಿಶ್ರಿತ ಮರಾಟಿ ಜನಾಂಗದ ಆಧಾರಿತ ಯಕ್ಷಗಾನ ಶಿವಭೈರವ ಮಹಮ್ಮಾಯಿ ಪ್ರದರ್ಶನಗೊಳ್ಳಲಿದೆ. 

                   ಅ.24ರಂದು ಬೆಳಗ್ಗೆ 7 ಕ್ಕೆ ಉಷಃಪೂಜೆ, ಅಯ್ಯಪ್ಪ ಭಜನಾ ಮಂಡಳಿ ಬಣ್ಪುತ್ತಡ್ಕ ಇವರಿಂದ ಭಜನೆ, ವಿದ್ಯಾರಂಭ, 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜಗೋಪಾಲ ನವಕಾನ ಅಧ್ಯಕ್ಷತೆ ವಹಿಸುವರು.  ಕೆ.ಎಸ್.ಇ.ಬಿ.ಎಲ್ ತಿರುವನಂತಪುರ ನಿರ್ದೇಶಕ ಸುರೇಂದ್ರನ್ ಪಿ., ಉಡುಪಿ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಪ್ರವೀಣ ಕುಮಾರಿ ಎಂ.ಕೆ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯುವ ಯಕ್ಷಗಾನ ಕಲಾವಿದ ಪ್ರಸಾದ್ ಕಿನ್ನಿಮಾಣಿ ಇವರಿಗೆ ಅಭಿನಂದನೆ. ನಿವೃತ್ತ ಸೈನಿಕ ಸದಾಶಿವ ನಾಯ್ಕ ಖಂಡಿಗೆ ಅವರಿಗೆ ಸನ್ಮಾನ, ಆರ್. ಚಕ್ರೇಶ್ವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ, ಹೊಸಂಗಡಿ ಅನಂತ ಗ್ಯಾಸ್ ಏಜೆನ್ಸಿಯ ಮ್ಹಾಲಕಿ ಶೋಭಾ ಗೋಪಾಲನ್, ಶಾರದೋತ್ಸವ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಕೃಷ್ಣ ನಾಯ್ಕ ಬದಿಯಡ್ಕ ಅವರಿಗೆ ಸನ್ಮಾನ, ಮಂಗಳೂರು ಜಿಲ್ಲಾ ಮರಾಟಿ ಸಂರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಮಲ ಮಹಾಲಿಂಗ ನಾಯ್ಕ ಅವರಿಂದ ಶುಭಾಶÀಂಸನೆ. ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷೆ ಕಮಲ ಪೆರಡಾಲ, ಸಹಾಯಕ ಇಂಜಿನಿಯರ್ ಸುಬ್ಬಣ್ಣ ನಾಯ್ಕ, ಚೋಮನಾಯ್ಕ ಬಾಲಡ್ಕ ಉಪಸ್ಥಿತರಿದ್ದು ಪ್ರತಿಭಾ ಪುರಸ್ಕಾರ ನೀಡಲಿರುವರು. ಮಧ್ಯಾಹ್ನ ಪ್ರಸಾದ ಭೋಜನದ ನಂತರ ಶ್ರೀ ಶಾರದಾ ದೇವಿಯ ಶೋಭಯಾತ್ರೆ ಆರಂಭÀವಾಗಲಿದೆ. ಸಿಂಗಾರಿಮೇಳ, ಕುಣಿತ ಭಜನೆ, ಮುತ್ತುಕೊಡೆಗಳೊಂದಿಗೆ ಶ್ರೀದೇವಿಯ ಭವ್ಯ ಮೆರವಣಿಗೆ ಗುರುಸದನದಿಂದ ಹೊರಟು ಬದಿಯಡ್ಕ ಪೇಟೆಯನ್ನು ಸಾಗಿ ಪೆರಡಾಲ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries