ಪೆರ್ಲ: ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ವಿಶ್ವ ಅಯೋಡಿನ್ ಕೊರತೆ ನಿವಾರಣಾ ದಿನವನ್ನು ಆಚರಿಸಲಾಯಿತು. ಶೇಣಿ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ ಉದ್ಘಾಟಿಸಿದರು. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರವೈದ್ಯಾಧಿಕಾರಿ ಡಾ.ಪಿ.ಆರ್.ಗ್ರೀಷ್ಮಾ ಅಧ್ಯಕ್ಷತೆ ವಹಿಸಿದ್ದರು. ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಸಂತೋಷ್ ಕುಮಾರಕ್ರಾಸ್ತಾ, ಪಿಟಿಎ ಅಧ್ಯಕ್ಷ ವಿಲ್ಸನ್ ಡಿಸೋಜ ಉಪಸ್ಥಿತರಿದ್ದರು. ಅಪರ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎನ್.ಪಿ.ಪ್ರಶಾಂತ್ ಸ್ವಾಗತಿಸಿದರು. ಪ್ರಭಾರ ಆರೋಗ್ಯ ನಿರೀಕ್ಷಕ ವಿ.ಸಜಿತ್ ವಂದಿಸಿದರು.
ಈ ಸಂದರ್ಭ ಶಾಲಾ ಮಕ್ಕಳಿಗೆ ನಡೆಸಲಾದ ವಿಚಾರ ಸಂಕಿರಣದಲ್ಲಿ ಹದಿಹರೆಯ ಮತ್ತು ಪೆÇೀಷಣೆ ವಿಷಯದಲ್ಲಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಡಯಟೀಷಿಯನ್ ಕೆ.ಶ್ರುತಿ, ಅಯೋಡಿನ್ ಕೊರತೆ ನಿವಾರಣಾ ವಿಧಾನಗಳು ಎಂಬ ವಿಷಯದ ಕುರಿತು ಕಲ್ಲಾರ್ ಪೂಡಂಕಲ್ಲ್ನ ವೆಳ್ಳರಿಕುಂಡ್ ತಾಲೂಕಾ ಆಸ್ಪತ್ರೆಯ ಡಯಟಿಷಿಯನ್ ಮೃದುಲಾ ಅರವಿಂದ್ ತರಗತಿ ನಡೆಸಿದರು. ನಂತರ ವಿದ್ಯಾರ್ಥಿಗಳಿಗೆ ಸಮಸ್ಯೆ ಪರಿಹಾರ ಸ್ಪರ್ಧೆ ಹಾಗೂ ಪೆÇೀಸ್ಟರ್ ಬರೆಯುವ ಸ್ಪರ್ಧೆ ನಡೆಸಲಾಯಿತು.ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 21 ರಂದು ಆಚರಿಸಲಾಗುತ್ತದೆ.