HEALTH TIPS

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಯಶಸ್ವಿಗೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಅಭಿವಂದನಾ ಕಾರ್ಯಕ್ರಮ

Top Post Ad

Click to join Samarasasudhi Official Whatsapp Group

Qries


                    ಕುಂಬಳೆ :ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ನವೆಂಬರ್ 7 ರಿಂದ 10ರ ತನಕ  ಧರ್ಮತ್ತಡ್ಕ  ಶ್ರೀ ದುರ್ಗಾಪರಮೇಶ್ವರಿ  ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು ಈ ಕಲೋತ್ಸವದ ಯಶಸ್ವಿಗೆ ಸಹಕರಿಸಿದ ಸಂಘ ಸಂಸ್ಥೆಗಳನ್ನು ಗೌರವಿಸುವ ಕಾರ್ಯಕ್ರಮವು ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು.


                ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ  ಶಿವಪ್ರಸಾದ್ ಶೆಟ್ಟಿ ಕುಡಾಲು ವಹಿಸಿದರು. ಕಾರ್ಯಕ್ರಮದಲ್ಲಿ  ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.


                ಶಾಲಾ ವ್ಯವಸ್ಥಾಪಕ  ಶಂಕರನಾರಾಯಣ ಭಟ್, ಶಾಲಾ ಮಾತೃ ಮಂಡಳಿ ಅಧ್ಯಕ್ಷೆ  ಶ್ರೀಮತಿ ಪುಷ್ಪಾ ಕಮಲಾಕ್ಷ , ಪೈವಳಿಕೆ ಪಂಚಾಯತ್ ವಾರ್ಡ್ ಸದಸ್ಯ ಶ್ರೀ. ಅಶೋಕ್ ಭಂಡಾರಿ , ಎಯುಪಿ ಶಾಲಾ ಮ್ಯಾನೇಜರ್ ಶ್ರೀಮತಿ ವಿಜಯಶ್ರೀ ಬಿ ಮತ್ತು ಹಿರಿಯ ಅಧ್ಯಾಪಕ  ರಾಮ್ ಮೋಹನ್ ಸಿ ಯಚ್. ಸಂಘ ಸಂಸ್ಥೆಗಳನ್ನು ಅಭಿನಂದಿಸಿದರು. 


               ಈ ಸಂಧರ್ಭದಲ್ಲಿ ಶ್ರೀ ಸತೀಶ್ಚಂದ್ರ ಭಂಡಾರಿ ಕೋಳಾರು, ಶ್ರೀ ಶಂಕರ ರಾವ್ ಕಕ್ವೆ , ಶ್ರೀ ಜಾನ್ ಡಿಸೋಜಾ , ಶ್ರೀ ಅಶ್ರಫ್ ಸೋಕೆ, ಶ್ರೀ ಗೋವಿಂದ ಭಟ್ ಕನಿಯಾಲ, ಶ್ರೀ. ಕೃಷ್ಣ ಕಿಶೋರ್ ಮೊದಲಾದವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.


              ಸಹಕರಿಸಿದ 45 ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘ ಸಂಸ್ಥೆಗಳ ಹೆಸರುಗಳನ್ನು ಉಣ್ಣಿಕೃಷ್ಣನ್ ಮತ್ತು ಶ್ರೀಮತಿ ನಿವೇದಿತಾ ವಾಚಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ. ಗೋವಿಂದ ಭಟ್ ಸ್ವಾಗತಿಸಿ , ಎಯುಪಿ ಶಾಲಾ  ಮುಖ್ಯೋಪಾಧ್ಯಾಯರಾದ . ಮಹಾಲಿಂಗ ಭಟ್ ವಂದಿಸಿದರು. ಕಾರ್ಯಕ್ರದಲ್ಲಿ ಶಾಲಾ ಅಧ್ಯಾಪಿಕೆಯರು ಪ್ರಾರ್ಥಿಸಿದರು.  ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries