HEALTH TIPS

ಕಾಸರಗೋಡು ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ-ಅವಲೋಕನ ಸಭೆ

          ಕಾಸರಗೋಡು: ಮುಖ್ಯಮಂತ್ರಿ ಮತ್ತು ಸಚಿವರು ಜನರೊಂದಿಗೆ ಸಂವಾದ ನಡೆಸುವ ಕಾಸರಗೋಡು ಕ್ಷೇತ್ರದ ನವಕೇರಳ ವೇದಿಕೆಯ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಕಾಸರಗೋಡು ಕ್ಷೇತ್ರದ ಅವಲೋಕನ ಸಭೆಯು ಜಿಲ್ಲಾಧಿಕಾರಿಗಳ ಚೇಂಬರ್‍ನಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕೆ.ಇಂಬಶೇಖರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

           ಕಾಸರಗೋಡಿನ ಪುಲಿಕುನ್ನ್ ಮುನ್ಸಿಪಾಲ್ ಕಾನ್ಫರೆನ್ಸ್ ಹಾಲ್‍ನಲ್ಲಿ ಜಿಲ್ಲೆಯ ಪ್ರಮುಖರೊಂದಿಗೆ ಮುಖ್ಯಮಂತ್ರಿ ಹಾಗೂ ಸಚಿವರು ಬೆಳಗ್ಗೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ ಸಭೆ, ನವಕೇರಳ ವೇದಿಕೆ ನಡೆಯುವ ಚೆಂಗಳ ಪಂಚಾಯತ್ ಮಿನಿ ಕ್ರೀಡಾಂಗಣದ ಸಿದ್ದತೆಗಳ ಮೌಲ್ಯಮಾಪನ ಮಾಡಲಾಯಿತು. ಚಪ್ಪರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುವುದು. ಸ್ವಯಂಸೇವಕರ ಸೇವೆಯನ್ನೂ ಖಾತ್ರಿಪಡಿಸಲಾಗುವುದು. ನವೆಂಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ನವಕೇರಳ ಸಮಾವೇಶ ನಡೆಯುವ ಮಿನಿ ಕ್ರೀಡಾಂಗಣದಲ್ಲಿ ಸ್ಥಾಪಿಸಲಾಗಿರುವ ವಿಶೇಷ ಕೌಂಟರ್‍ನಲ್ಲಿ ಸಾರ್ವಜನಿಕರಿಗೆ ತಮ್ಮ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

            ಸಭೆಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಸಂಚಾಲಕ ಎ.ಡಿ.ಎಂ ಕೆ.ನವೀನಬಾಬು, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ನೋಡಲ್ ಅಧಿಕಾರಿಗಳಾದ ಆರ್ಯ ಪಿ.ರಾಜ್, ಆಸಿಫ್ ಅಲಿಯಾರ್, ಅಜಿತ್ ಜಾನ್, ವಿವಿಧ ಉಪಸಮಿತಿ ಸಂಚಾಲಕರು, ಅಧ್ಯಕ್ಷರು, ಪಂಚಾಯತ್ ಮತ್ತು ಪುರಸಭೆ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries