HEALTH TIPS

₹200 ಕೋಟಿ ಬ್ಯಾಂಕ್ ಸಾಲ ವಂಚನೆ ಕೇಸ್: ಜಮ್ಮು-ಕಾಶ್ಮೀರ ಸೇರಿ ಹಲವೆಡೆ ಇ.ಡಿ ದಾಳಿ

Top Post Ad

Click to join Samarasasudhi Official Whatsapp Group

Qries

             ಮ್ಮು: ಭಾರತ್ ಪೇಪರ್ಸ್ ಲಿಮಿಟೆಡ್‌ಗೆ(ಬಿಪಿಎಲ್‌) ಸಂಬಂಧಿಸಿದ ₹200 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳ ಹಲವೆಡೆ ದಾಳಿ ನಡೆಸಿದೆ.

             ಮೂರೂ ರಾಜ್ಯಗಳ 9 ಸ್ಥಳಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಇ.ಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

              ಬಿಪಿಎಲ್ ಕಂಪನಿಯು ಜಮ್ಮು ಮತ್ತು ಲುಧಿಯಾನ ಮೂಲದ ಭಾರತ್ ಬಾಕ್ಸ್ ಫ್ಯಾಕ್ಟರಿ ಇಂಡಸ್ಟ್ರೀಸ್‌ನ(ಬಿಪಿಎಫ್‌ಐಎಲ್) ಅಸೋಸಿಯೇಟ್ ಸಂಸ್ಥೆಯಾಗಿದೆ.

                 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ ಈ ಸಂಸ್ಥೆಯ ನಿರ್ದೇಶಕರು ₹200 ಕೋಟಿ ವಂಚಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಿಎನ್‌ಬಿ ಮತ್ತು ಕರೂರ್ ವೈಶ್ಯ ಬ್ಯಾಂಕ್‌ಗೂ ವಂಚಿಸಿರುವ ಆರೋಪವಿದೆ.

               ರಾಜಿಂದರ್ ಕುಮಾರ್, ಪ್ರವೀಣ್ ಕುಮಾರ್, ಬಲ್ಜಿಂದರ್ ಸಿಂಗ್, ಅನಿಲ್ ಕುಮಾರ್ ಮತ್ತು ಅನಿಲ್ ಕಶ್ಯಪ್ ಭಾರತ್ ಪೇಪರ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries