HEALTH TIPS

ಗುರುವಾಯೂರಪ್ಪನ ಮುಂದೆ ಭಕ್ತಿಸಾಂದ್ರ ತುಲಾಭಾರ ನೆರವೇರಿಸಿದ ವಿದೇಶಿಗರು:ಏಕಕಾಲದಲ್ಲಿ 27 ಜನರಿಂದ ತುಲಾಭಾರ

             ಗುರುವಾಯೂರು: ವಿದೇಶೀ ಭಕ್ತರ ದಂಡು ಗುರುವಾಯೂರಪ್ಪನ ಮುಂದೆ ಎದೆತುಂಬಿ ನಿಂತಿದ್ದ ದೃಶ್ಯಕ್ಕೆ ಶ್ರೀಕ್ಷೇತ್ರ ಇಂದು ಸಾಕ್ಷಿಯಾಯಿತು. ಫ್ರಾನ್ಸ್, ಬ್ರೆಜಿಲ್, ಆಸ್ಟ್ರೇಲಿಯಾ, ಜರ್ಮನಿ ಮುಂತಾದ ದೇಶಗಳ 27 ಭಕ್ತರು ಗುರುವಾಯೂರಪ್ಪನ ಮುಂದೆ ಕೈಮುಗಿದು ತುಲಾಭಾರ ಸೇವೆಸಲ್ಲಿಸಿದ್ದು ವಿಶೇಷವಾಗಿತ್ತು. 

              ಸನಾತನ ಧರ್ಮವನ್ನು ಅನುಸರಿಸಿ ಅವರು ಸಾಯಿ ಸಂಜೀವನಿ ಟ್ರಸ್ಟ್‍ನ ಅತಿಥಿಗಳಾಗಿ ಬಂದಿದ್ದರು. ಗುರುವಾಯೂರು ದೇವಸ್ಥಾನದಲ್ಲಿ ಇಷ್ಟೊಂದು ವಿದೇಶಿ ಭಕ್ತರಿಗೆ ತುಲಾಭಾರ ನಡೆಯುತ್ತಿರುವುದು ಇದೇ ಮೊದಲು.

              ಬ್ರೆಜಿಲ್‍ನ ಸೀತಾಜಿ ನೇತೃತ್ವದ ತಂಡ ತುಲಾಭಾರ ಸೇವೆ ಕೈಗೊಂಡರು. ಅವರು ಕಳೆದ ಏಳು ವರ್ಷಗಳಿಂದ ಆನ್‍ಲೈನ್‍ನಲ್ಲಿ ಕೇಳುತ್ತಿದ್ದ ಗುರುವಾಯೂರ್ ಕಥೆಗಳು ಮತ್ತು ಕೃಷ್ಣನ ಕಥೆಗಳನ್ನು ಹಂಚಿಕೊಂಡರು.

              ಎಲ್ಲಾ 27 ಜನರು ಮಣಿಕಿನಾರ್ ತೀರ್ಥದೊಂದಿಗೆ ತುಲಾಭಾರ ಸೇವೆ ನಡೆಸಿದರು.  ಸಾಧನಾ ಮಾರ್ಗವನ್ನು ಅನುಸರಿಸಿ, ದೇಹ ಪ್ರಜ್ಞೆಯ ಶರಣಾಗತಿಯ ಪರಿಕಲ್ಪನೆಯಲ್ಲಿ ತುಲಾಭಾರಕ್ಕೆ ತೀರ್ಥಜಲವನ್ನು ಆರಿಸಿಕೊಂಡರು.

             ನಂತರ ಗುರುವಾಯೂರು ಸಾಯಿ ಮಂದಿರದಲ್ಲಿ ನಡೆದ ಮಹಾಭಿಷೇಕ ಹಾಗೂ ಅಮವಾಸ್ಯೆ ಹವನದಲ್ಲಿ ಪಾಲ್ಗೊಂಡರು. ಅಲ್ಲಿಂದ ಆ ಭಕ್ತರು ತಿರುವಣ್ಣಾಮಲೈಗೆ(ತಮಿಳುನಾಡು-ಮಹರ್ಷಿ ಅರವಿಂದರ ಆಶ್ರಮ) ಪ್ರಯಾಣಿಸಿದರು.  ಅವರು ಸಾಯಿ ಸಂಜೀವಿನಿ ನಡೆಸುತ್ತಿರುವ ಮೌನ ಯೋಗ ಸಾಧಕರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries