HEALTH TIPS

ಅರುಣಾಚಲ ಪ್ರದೇಶ: ನಾಡ ಬಂದೂಕು ಒಪ್ಪಿಸಿದ 38 ಮಂದಿ

Top Post Ad

Click to join Samarasasudhi Official Whatsapp Group

Qries

             ಟಾನಗರ: ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆ ಸಮೀಪದ ತೇಜೂನಲ್ಲಿ ಏರ್ಪಡಿಸಿದ್ದ ಕಾರ್ಯಕ್ರದಲ್ಲಿ 38 ಮಂದಿ ನಾಡಬಂದೂಕುಗಳನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದರು.

             ವನ್ಯಜೀವಿ ಬೇಟೆಯನ್ನು ತಡೆಯಲು ಮತ್ತು ವನ್ಯಜೀವಿಗಳ ಹತ್ಯೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯು ನಾಡ ಬಂದೂಕು ವಾಪಸ್ ನೀಡುವ ಅಭಿಯಾನವನ್ನು ಆರಂಭಿಸಿದೆ.

              ಅಭಿಯಾನದಡಿಯಲ್ಲಿ ರಾಜ್ಯದಲ್ಲಿ ಈವರೆಗೆ 2,400 ನಾಡ ಬಂದೂಕುಗಳು ಮತ್ತು 9 ಪರವಾನಗಿ ಪಡೆದ ಬಂದೂಕುಗಳನ್ನು ಜನರು ಸ್ವಯಂಪ್ರೇರಿತವಾಗಿ ಇಲಾಖೆಗೆ ಒಪ್ಪಿಸಿದ್ದಾರೆ.

                ಮೊದಲಿಗೆ ಈ ಅಭಿಯಾನವನ್ನು ಲುಮ್ದಂಗ್‌ನಲ್ಲಿ ಮಾರ್ಚ್‌ 21, 2017ರಲ್ಲಿ ಆರಂಭಿಸಲಾಗಿತ್ತು. ಆಗ 46 ನಾಡ ಬಂದೂಕುಗಳನ್ನು ಜನರು ಇಲಾಖೆಗೆ ಒಪ್ಪಿಸಿದ್ದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries