HEALTH TIPS

'ಕಾಲು ಕೆರೆದು ಇವರ ಮೇಲೆ ಜಗಳಕ್ಕೆ ಬರಬೇಡಿ': ಶತ್ರುರಾಷ್ಟ್ರಗಳ ಸೇನೆಗೆ ಮಹೀಂದ್ರಾ ಸಲಹೆ

               ವದೆಹಲಿ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಿಲಿಟರಿ ಪರೇಡ್ ಕುರಿತು ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ಇತರ ದೇಶಗಳ ಸೈನ್ಯಕ್ಕೆ ಸಲಹೆಯನ್ನು ನೀಡಿದ್ದಾರೆ.

              ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥ್​ನಲ್ಲಿ ಶುಕ್ರವಾರ ನಡೆದ ಪರೇಡ್ ಆಕರ್ಷಕವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ನಮ್ಮ ಭಾರತೀಯ ಸೇನೆಯ ಶಕ್ತಿಯನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯನ್ನೂ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

                   ನಮ್ಮ ಸೇನೆಯ ಶಕ್ತಿ ಸಾಮರ್ಥ್ಯಗಳನ್ನು ಉಲ್ಲೇಖಿಸಿ 'ಭಾರತ ಬಲಿಷ್ಠವಾಗಿದೆ' ಎಂಬರ್ಥದಲ್ಲಿ ಎಮೋಜಿಗಳನ್ನು ಸೇರಿಸಲಾಗಿದೆ. ಈ ಪೋಸ್ಟ್ ಈಗ ವೈರಲ್ ಆಗಿದೆ.

                 ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಮ್ಮ ಸೇನಾ ಶಕ್ತಿಯನ್ನು ಜಗತ್ತಿಗೆ ತೋರಿಸಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಜೊತೆಗೆ, ನಾಗ್ ಕ್ಷಿಪಣಿಗಳು, ಟಿ-90 ಭೀಷ್ಮ ಯುದ್ಧ ಟ್ಯಾಂಕ್‌ಗಳು, ಡ್ರೋನ್ ಜಾಮರ್‌ಗಳು, ಕಣ್ಗಾವಲು ವ್ಯವಸ್ಥೆಗಳು, ವಾಹನ ಮೌಂಟೆಡ್ ಮೋಟಾರ್‌ಗಳು, ಪಿನಾಕಾ ಮಲ್ಟಿಪಲ್ ರಾಕೆಟ್ ಸಿಸ್ಟಮ್, ವೆಪನ್ ಲೊಕೇಶನ್ ರಾಡಾರ್ ಸಿಸ್ಟಮ್‌ಗಳು. ಬಿಎಂಪಿ -2 ಸಶಸ್ತ್ರ ಪಡೆಗಳನ್ನು ಪ್ರದರ್ಶಿಸಲಾಯಿತು. ಇದೇ ಪ್ರಥಮ ಬಾರಿಗೆ ಮೂರು ಪಡೆಗಳಿಗೆ ಸೇರಿದ ಮಹಿಳೆಯರು ಪ್ರದರ್ಶಿಸಿದ ಮೆರವಣಿಗೆ ಆಕರ್ಷಕವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries