ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೂತನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ, ಕ್ಯಾಂಪ್ಕೋ ನಿರ್ದೇಶಕ ಡಾ. ಟಿ ಕೆ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಆಯ್ಕೆಯಾಗಿದ್ದಾರೆ. ಇವರು ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಸಂಚಾಲಕರಾಗಿದ್ದಾರೆ. ಕಸಾಪ ಕೇರಳ ಗಡಿನಾಡ ಘಟಕದಲ್ಲಿ ದೀರ್ಘ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್.ವಿ ಭಟ್ ಅವರ ನಿಧನದಿಂದ ಸ್ಥಾನ ತೆರವಾಗಿದ್ದು, ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಷಿ ಈ ಆಯ್ಕೆ ನಡೆಸಿದ್ದಾರೆ.
ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷರ ಆಯ್ಕೆ ಜತೆಗೆ ಇತರ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಶೇಖರ ಶೆಟ್ಟಿ.ಕೆ , ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ.(ಗೌರವ ಕಾರ್ಯದರ್ಶಿಗಳು)ಡಾ.ಬಿ ರಾಜಗೋಪಾಲ್(ಗೌರವ ಕೋಶಾಧ್ಯಕ್ಷರು)ವಿಶಾಲಾಕ್ಷ ಪುತ್ರಕಳ,ಪಿ ರಾಮಚಂದ್ರ ಭಟ್ (ಸಂಘಟನಾ ಕಾರ್ಯದರ್ಶಿಗಳು) ಸದಸ್ಯರಾಗಿ ಕವಿತಾ ಕೂಡ್ಲು, ಡಾ.ಆಶಾಲತ ಸಿ ಕೆ, ಪ್ರವೀಣಕುಮಾರ್, ವಿದ್ಯಾವಾಣಿ ಮಠದಮೂಲೆ, ಆಯಿಷಾ ಎ.ಎ.ಪೆರ್ಲ, ದೇವದಾಸ.ಕೆ, ವಕೀಲ ಥಾಮಸ್ ಡಿ ಸೋಜ ಅವರನ್ನು ಆಯ್ಕೆ ಮಾಡಲಾಯಿತು.