ಕಾಸರಗೋಡು: ಕೋಳಿಯಡ್ಕದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ವಾಹನ ಮಧೂರು ಸನಿಹದ ಕುಂಜಾರ್ ಕೊರತ್ತಿಕುಂಡು ಬಳಿ ರಸ್ತೆ ಅಂಚಿನ ಹೊಂಡಕ್ಕೆ ಚಲಿಸಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಬಸ್ಸಿನಲ್ಲಿದ್ದ 12ಮಂದಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿದ್ಯಾನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ತುಂತುರು ಮಳೆಯಾಘುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಚಾಲಕನ ನಿಯಂತ್ರಣತಪ್ಪಿ ರಸ್ತೆಯಿಂದ ಸನಿಹದ ಹೊಂಡಕ್ಕೆ ಚಲಿಸಿ ಅಪಘಾತ ಸಂಭವಿಸಿದೆ. ಮರಕ್ಕೆ ಡಿಕ್ಕಿಯಾಗಿ ವಾಹನ ನಿಲುಗಡೆಗೊಂಡ ಪರಿಣಾಮ ಭಾರಿ ದುರಂತ ತಪ್ಪಿತ್ತು.