ಪಾಲಕ್ಕಾಡ್: ಪಟ್ಟಾಂಬಿಯಲ್ಲಿ ಜಾತ್ರೆಯ ವೇಳೆ ಆನೆಯನ್ನು ಚಾವಟಿಗೆಯಿಂದ ಥಳಿಸಿರುವ ಬಗ್ಗೆ ಆನೆ ಪ್ರೇಮಿಗಳ ಗುಂಪೆÇಂದು ಅಧಿಕಾರಿಗಳಿಗೆ ದೂರು ನೀಡಿದೆ.
ಮುಖ್ಯ ವನ್ಯಜೀವಿ ವಾರ್ಡನ್, ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ಮುಖ್ಯಸ್ಥರು ಮತ್ತು ಅರಣ್ಯ ಮತ್ತು ಪ್ರಾಣಿ ಸಂರಕ್ಷಣಾ ವಿಭಾಗದ ಮುಖ್ಯಸ್ಥರಿಗೆ ದೂರು ನೀಡಲಾಗಿದೆ. ಪಾಲಕ್ಕಾಡ್ ಆನೆÀಪ್ರೇಮಿ ಸಂಗಮದ ಜಿಲ್ಲಾಧ್ಯಕ್ಷ ಹರಿದಾಸ್ ಮಚಿಂಗಲ್ ದೂರು ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಿ ಪ್ರಾಣಿ ಹಿಂಸೆ ಕಾಯಿದೆಯಡಿ ಇಲಾಖಾ ಕ್ರಮಕೈಗೊಳ್ಳಬೇಕು ಹಾಗೂ ಉತ್ಸವ ಸಮಿತಿ ಸದಸ್ಯರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಸಮಿತಿ ಸದಸ್ಯರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ಮುಂದಿನ ವರ್ಷಗಳಲ್ಲಿ ಉತ್ಸವ ಸಮಿತಿಯವರಿಗೆ ಅವಕಾಶ ನೀಡಬಾರದು ಎಂದು ಆನೆ ಪ್ರೇಮಿಗಳು ಆಗ್ರಹಿಸಿದ್ದಾರೆ.
ಮಂಗಳಮಕುನ್ ಮುಕುಂದನ್ ಆನೆಯನ್ನು ಉತ್ಸವ ಸಮಿತಿಯ ಒಂದು ವಿಭಾಗ ಥಳಿಸಿತ್ತು. ಗುಂಪಿನಲ್ಲಿ ನಿಂತಿದ್ದ ಆನೆಯನ್ನು ಚಾವಟಿಯಿಂದ ಥಳಿಸಲಾಗಿದೆ. ಅದರ ವಿಡಿಯೋ ಹೊರಬಿದ್ದ ನಂತರ ಘಟನೆ ವಿವಾದಕ್ಕೆಡೆಯಾಯಿತು.