HEALTH TIPS

ಕಾಂಗ್ರೆಸ್ ಬೇರುಗಳಿಲ್ಲದ ಬಳ್ಳಿಯಂತೆ, ಬೆಂಬಲಿಸುವವರನ್ನು ಅದು ಒಣಗಿಸುತ್ತದೆ: ಮೋದಿ

             ರಭಣಿ: ಕಾಂಗ್ರೆಸ್‌ ಬೇರುಗಳಿಲ್ಲದ ಬಳ್ಳಿಯಂತೆ, ಅದನ್ನು ಬೆಂಬಲಿಸುವವರನ್ನು ಅದು ಒಣಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.

            ಮಹಾರಾಷ್ಟ್ರದ ಮರಾಠವಾಡದ ಪರಭಣಿಯಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಈ ಬಾರಿಯ ಲೋಕಸಭೆ ಚುನಾವಣೆಯು ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿಯನ್ನಾಗಿಸಲು ನಡೆಯುತ್ತಿರುವ ಚುನಾವಣೆಯಾಗಿದೆ' ಎಂದು ಹೇಳಿದ್ದಾರೆ.

              'ಕೇವಲ 10 ವರ್ಷಗಳಲ್ಲಿ ದೇಶವು ಅಭಿವೃದ್ಧಿಯ ಸುದೀರ್ಘ ಹಾದಿಯನ್ನು ಕ್ರಮಿಸಿದೆ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಈ ಚುನಾವಣೆ ಸಹಕಾರಿಯಾಗಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯು ಮೋದಿ ಅವರ 'ಗ್ಯಾರಂಟಿ ಕಾರ್ಡ್‌' ಆಗಿದೆ' ಎಂದು ಅವರು ತಿಳಿಸಿದ್ದಾರೆ.

               ದೇಶದ ಬಡವರಿಗೆ ಸುಮಾರು 3 ಕೋಟಿ ಮನೆಗಳನ್ನು ಬಿಜೆಪಿ ಸರ್ಕಾರ ನಿರ್ಮಿಸಲಿದೆ. 'ನಿಮ್ಮ (ಜನರ) ಕನಸುಗಳೇ ನನ್ನ (ಮೋದಿ) ಕನಸುಗಳಾಗಿವೆ' ಎಂದು ಮೋದಿ ಹೇಳಿದ್ದಾರೆ.

ಏಪ್ರಿಲ್ 26ರಂದು ಪರಭಣಿ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries